ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಓದುಗರ ಮಾರ್ಗದರ್ಶಿ (ರೀಡೆರ್ಸ್ ಗೈಡ್)

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

pramanam-sastram

ಕೆಲವು ಮೂಲ ಪದಗಳು (ಶ್ರಿವೈಷ್ಣವ ಪರಿಭಾಷೆ):

  • ಆಚಾರ್ಯ, ಗುರು – ಆಧ್ಯಾತ್ಮಿಕ ಗುರು – ತಿರುಮಂತ್ರ ಉಪದೇಶ ಕೊಡುವವರು
  • ಶಿಷ್ಯ – ಗುರುವಿನ ಕೆಳಗೆ ಅಭ್ಯಾಸ ಮಡುವವನು
  • ಭಗವಾನ್ / ಭಗವಂತ – ಶ್ರೀಮನ್ ನಾರಾಯಣನ್
  • ಅರ್ಚೈ/ಅರ್ಚಾ – ಎಂಪೆರುಮಾನಾರ್ ದಯೆಯುಳ್ಳ/ಕರುಣಾಮಯವಾದ ದೈವಿಕ ವಿಗ್ರಹಗಳು – ದೇವಾಲಯದಲ್ಲಿ, ಮನೆಯಲ್ಲಿ, ಮಠದಲ್ಲಿ ಇರುವ ದೈವಿಕ ವಿಗ್ರಹಗಳು
  • ಎಂಪೆರುಮಾನ್, ಪೆರುಮಾಳ್, ಈಶ್ವರ – ಭಗವಾನ್ / ಭಗವಂತ/ ನನ್ನ ಒಡೆಯ
  • ಎಂಪೆರುಮಾನಾರ್ – ಶೀ ರಾಮಾನುಜ – ಭಗವಾನ್ / ಭಗವಂತ / ಎಂಪೆರುಮಾನ್ – ಗಿಂತಲೂ ಹೆಚ್ಚು ಸಹಾನುಭೂತಿಯುಳ್ಳವರು (ಮೇಲುಮ್ ಕರುಣೈಯುಳ್ಳವರ್)
  • ಪಿರಾನ್ – ದಯೆ / ಒಲವು ಕೊಡುವವನು – ದಯವು / ಸದಾಗಮ್ಯಮಾಯ್ ಇರುಪ್ಪವನ್
  • ಪಿರಾಟ್ಟಿ, ತಾಯಾರ್ – ಶ್ರೀ ಮಹಾಲಕ್ಷ್ಮೀ
  • ಮೂಲವರ್ – ಎಂಪೆರುಮಾನ್ ಅವರ ಪವಿತ್ರವಾದ ಗರ್ಭಗುಡಿಯೊಳಗೆ ಸ್ಥಾಪಿಸಿರುವ ವಿಗ್ರಹ
  • ಉತ್ಸವರ್ – ಎಂಪೆರುಮಾನ್ ಅವರ ಪಂಚಲೋಹ (ಬೆರೆ ಲೋಹದಲ್ಲೂ ಇರಬಹುದು) ವಿಗ್ರಹ- ಮೆರವಣಿಗೆಗೆ ಹೋಗುವ ವಿಗ್ರಹಗಳು
  • ಅಳ್ವಾರ್ಗಳು – ಸದಾ ಭಕ್ತಿಯಲ್ಲಿ ಮುಳುಗಿರುವವರು – ಭಗವಂತನ ಪರಿಪೂರ್ಣ ಆಶೀರ್ವಾದ ಹಾಗೂ ಅನುಗ್ರಹ ಪಡೆದ ವೈಷ್ಣವ ಸಂತರು. ಇವರುಗಳು ದ್ವಾಪರ ಯುಗದ ಹಂತದಿಂದ ಕಲಿ ಯುಗದ ಆರಂಭದವರೆಗೂ, ದಕ್ಷಿಣ (ಸೌತ್) ಭಾರತದಲ್ಲಿ ಜೀವಿಸಿದರು
  • ಪೂರ್ವಾಚಾರ್ಯರ್ – ಶ್ರಿಮನ್ ನಾರಾಯಣನಿಂದ ಶ್ರೀವೈಷ್ಣವ ಸಂಪ್ರದಾಯದಲ್ಲಿ ಬಂದಿರುವ ಆಧ್ಯಾತ್ಮಿಕ ಗುರುಗಳು
  • ಭಾಗವತರು, ಶ್ರೀವೈಷ್ಣವರು – ಭಗವಾನ್ ಶ್ರಿಮನ್ ನಾರಾಯಣನ ಸೇವಕರು
  • ಅರೈಯರ್ – ಇವರು ಶ್ರೀವೈಷ್ಣವರು – ಭಗವಂತನ ಮುಂದೆ ದಿವ್ಯ ಪ್ರಭಂಧಗಳನ್ನು ಹಾಡಿನಲ್ಲಿ ಹಾಗು ಭಾವಭಂಗಿಯಲ್ಲಿ ಹೇಳುವವರು
  • ಓರಾಣ್ ವಳಿ ಆಚಾರ್ಯರುಗಳು  – ಕೆಲವು ಆಯ್ಕೆಯ ಆಚಾರ್ಯರುಗಳು – ಪೆರಿಯ ಪೆರುಮಾಳ್ ರಿಂದ ಮಣವಾಳ ಮಾಮುನಿಗಳವರೆಗೂ ಸಂಪ್ರದಾಯವನ್ನು ನಡೆಸಿಕೊಂಡು ಬಂದವರು:
    • ಪೆರಿಯ ಪೆರುಮಾಳ್
    • ಪೆರಿಯ ಪಿರಾಟ್ಟಿ
    • ಸೇನೈ ಮುದಲಿಯಾರ್
    • ನಮ್ ಆಳ್ವಾರ್
    • ನಾಥಮುನಿಗಳ್
    • ಉಯ್ಯಕೊಂಡಾರ್
    • ಮಣಕ್ಕಾಲ್ ನಂಬಿ
    • ಆಳವಂದಾರ್ (ಯಾಮುನಾಚಾರ್ಯ)
    • ಪೆರಿಯ ನಂಬಿ
    • ಎಂಪೆರುಮಾನಾರ್ (ಭಗವತ್ ರಾಮಾನುಜ)
    • ಎಂಬಾರ್
    • ಭಟ್ಟರ್
    • ನಂಜಿಯರ್
    • ನಮ್ ಪಿಳ್ಳೈ
    • ವಡಕ್ಕು ತಿರುವೀದಿ ಪಿಳ್ಳೈ
    • ಪಿಳ್ಳೈ ಲೋಕಾಚಾರ್ಯರ್
    • ತಿರುವಾಯ್ಮೋಳಿ  ಪಿಳ್ಳೈ
    • ಅಳಗಿಯ ಮನವಾಳ ಮಾಮುನಿಗಳ್ (ಶ್ರೀ ವರವರಮುನಿ)
  • ದಿವ್ಯ ಪ್ರಭಂಧಮ್ – ಆಳ್ವಾರ್ಗಳ ಪಾಶುರಗಳನ್ನು ಅರುಳಿಚ್ಹೆಯಲ್ ಎಂದು ಕರೆಯಲ್ಪಡುತ್ತದೆ
  • ದಿವ್ಯ ದಂಪತಿ – ಶ್ರೀಮನ್ ನಾರಾಯಣನ್ ಮತ್ತು ಶ್ರೀ ಮಹಾಲಕ್ಷ್ಮೀ
  • ದಿವ್ಯ ದೇಶಮ್ – ಆಳ್ವಾರ್ಗಳು ವೈಭವೀಕರಿಸಿದ ಭಗವಂತನ ಕ್ಷೇತ್ರ
  • ದಿವ್ಯ ಸೂಕ್ತಿ, ಶ್ರೀ ಸೂಕ್ತಿ – ಭಗವಂತ/ಆಳ್ವಾರ್/ಆಚಾರ್ಯನ್ ಮಾತುಗಳು/ಉಪದೇಶಗಳು
  • ಅಭಿಮಾನ ಸ್ಥಳಗಳು – ಪೂರ್ವಾಚಾರ್ಯರುಗಳಿಗೆ  ಪ್ರಿಯವಾದ ಭಗವಂತನ ಸ್ಥಳಗಳು
  • ಪಾಶುರಮ್ – ಪದ್ಯ/ಶ್ಲೋಕ
  • ಪದಿಗಮ್ – ದಶಕ(10 ಪದ್ಯಗಳ/ಪಾಶುರಮ್ ಸಂಗ್ರಹ)
  • ಪತ್ತು – ನೂರು (100 ಪಾಶುರಮ್/ಪದ್ಯಗಳ ಸಂಗ್ರಹ)

ಶ್ರೀ ವೈಷ್ಣವರು ಸಾಮಾನ್ಯವಾಗಿ ಉಪಯೊಗಿಸುವ ಪದಗಳು ಅದರ ನಿರ್ದಿಷ್ಟ ಅರ್ಥಗಳು

  • ಕೋಯಿಲ್ – ಶ್ರೀರಂಗಂ
  • ತಿರುಮಲೈ – ತಿರುವೆಂಕಟಮ್, ತಿರುಮಾಲಿರುನ್ಚೋಲೈ
  • ಪೆರುಮಾಳ್ ಕೋಯಿಲ್ – ಕಾಂಚೀಪುರಂ
  • ಪೆರುಮಾಳ್ – ಶ್ರೀ ರಾಮ
  • ಇಳಯ ಪೆರುಮಾಳ್ – ಲಕ್ಷ್ಮಣ
  • ಪೆರಿಯ ಪೆರುಮಾಳ್ – ಶ್ರೀರಂಗನಾಥನ್ (ಮೂಲವರ್)
  • ನಮ್ ಪೆರುಮಾಳ್ – ಶ್ರೀರಂಗನಾಥನ್ (ಉತ್ಸವರ್)
  • ಆಳ್ವಾರ್ – ನಮ್ ಆಳ್ವಾರ್
  • ಸ್ವಾಮಿ – ಶ್ರೀ ರಾಮಾನುಜ
  • ಜೀಯರ್, ಪೆರಿಯ ಜೀಯರ್ – ಮಣವಾಳ ಮಾಮುನಿಗಳ್
  • ಗುಣಮ್ – ಭಗವತ್ ಗುಣಗಳು
    • ಪರತ್ವಮ್ – ಪ್ರಾಬಲ್ಯ
    • ಸೌಲಭ್ಯಮ್ – ಸುಲಭವಾಗಿ ಲಭಿಸುವ
    • ಸೌಶೀಲ್ಯಮ್ – ಹೃದಯ ವೈಶಾಲ್ಯ
    • ಸೌಂದರ್ಯಮ್ – ದೈಹಿಕ ಸೌಂದರ್ಯ
    • ವಾತ್ಸಲ್ಯಮ್ – ವಾತ್ಸಲ್ಯ
    • ಮಾಧುರ್ಯಮ್ – ಮಾಧುರ್ಯ
    • ಕೃಪೈ, ಕರುಣೈ, ದಯಾ, ಅನುಕಂಪ – ಕರುಣೆ,ದಯೆ
  • ರೂಪಮ್ – ಆಕಾರ/ರೂಪ
  • ಸ್ವರೂಪಮ್ – ಸ್ವಭಾವ
  • ಮೋಕ್ಷಮ್ – ಮೋಕ್ಷ – ಸಂಸಾರ ಬಂಧನದಿಂದ ಬಿಡುಗಡೆ.
    • ಭಗವತ್ ಕೈಂಕರ್ಯ ಮೋಕ್ಷಮ್ – ಸಂಸಾರ ಬಂಧನದಿಂದ ಬಿಡುಗಡೆಯಾದಮೇಲೆ ಶಾಶ್ವತವಾಗಿ ಪರಮಪದದಲ್ಲಿ ಸೇವೆಯಲ್ಲಿ ತೊಡಗಿರುವುದು.
    • ಕೈವಲ್ಯಮ್ – ಸಂಸಾರ ಬಂಧನದಿಂದ ಬಿಡುಗಡೆಯಾದಮೇಲೆ ಶಾಶ್ವತವಾಗಿ ಸ್ವಯಂ ಸ೦ತೋಷದಲ್ಲಿ ಕಳೆಯುವುದು
  • ಕರ್ಮ – ಕ್ರಿಯೆ – ಪುಣ್ಯ / ಪಾಪ ಎಂತಲೂ ಅರ್ಥ
  • ಶಾಸ್ತ್ರಮ್ – ನಮ್ಮ ದಿನ ನಿತ್ಯ ಕರ್ಮ/ಕ್ರಿಯೆಗಳಿಗೆ ಮಾರ್ಗದರ್ಶನ ಕೊಡುವ ಅಧಿಕೃತ ಗ್ರಂಥಗಳು – ವೇದ, ವೇದಾಂತ, ಪಂಚರಾತ್ರಮ್, ಇತಿಹಾಸ, ಪುರಾಣ, ಆಳ್ವಾರ್ ದಿವ್ಯ ಪ್ರಬಂಧಗಳು, ಆಚಾರ್ಯಗಳ ಕೃತಿಗಳು– ಸ್ತೋತ್ರ, ವ್ಯಾಖ್ಯಾನ
  • ಕರ್ಮ ಯೋಗಮ್, ಜ್ಞಾನ ಯೋಗಮ್, ಭಕ್ತಿ ಯೋಗಮ್ – ಭಗವಂತನನ್ನು ಸೇರಲು ಮಾರ್ಗ
  • ಪ್ರಪತ್ತಿ, ಶರಣಾಗತಿ – ಶರಣಾಗತಿ – ಭಗವಂತನೆ ಉಪಾಯ
  • ಆಚಾರ್ಯ ನಿಷ್ಟೈ – ಪ್ರಪನ್ನನ್ನು ಆಚಾರ್ಯರ ಪಾದ ಕಮಲದಲ್ಲಿ ಆಶ್ರಯ ಪಡೆದಿರುವುದರಿಂದ ಅವರನ್ನು ಆಚಾರ್ಯ ನಿಷ್ಟರ್ಗಳೆಂದು ಕರೆಯುವರು
  • ಆಚಾರ್ಯ ಅಭಿಮಾನಮ್ – ಆಚಾರ್ಯರ ಅಭಿಮಾನ ಪಡೆಯುವುದು
  • ಪಂಚ ಸಂಸ್ಕಾರಮ್ (ಸಮಾಶ್ರಯಣಮ್) – ನಮ್ಮನ್ನು ಸಂಸಾರ ಮತ್ತು ಪರಮಪದ ಕೈಂಕರ್ಯ/ಸೇವೆಗೆ ಸಿದ್ಧಪಡಿಸಲು ನಡೆಯುವ ಶುದ್ಧೀಕರಣ ಪ್ರಕ್ರಿಯೆ. ಇದರಲ್ಲಿ ಕೆಳಗಿನ ವಿಷಯಗಳು ಒಳಗೊಂಡಿದೆ:
    • ತಾಪ (ಬಿಸಿ)- ಶಂಖ ಚಕ್ರ ಲಾಂಚನಮ್ – ನಮ್ಮ ಭುಜದ ಮೇಲೆ ಇಡುವ ಶಂಖ ಚಕ್ರ ಮುದ್ರಣ. ನಾವು ಎಂಪೆರುಮಾನಾರ್ ಸ್ವತ್ತು ಎಂದು ಗುರುತಿಸಬಲ್ಲದು.
    • ಪುಣ್ಡ್ರ (ಚಿಹ್ನೆ) – ದ್ವಾದಶ ಊರ್ಧ್ವ ಪುಣ್ಡ್ರ ಧಾರಣಮ್ – ದೇಹದ 12 ಅಂಗಾಂಗಗಳಲ್ಲಿ ತಿರುಮಣ್ ಮತು ಶ್ರೀಚೂರ್ಣವನ್ನು ಧರಿಸಿಕೊಳ್ಳುವುದು.
    • ನಾಮ (ಹೆಸರು) – ದಾಸ್ಯ ನಾಮಮ್ – ಆಚಾರ್ಯರ್ ಹೊಸ ಹೆಸರನ್ನು ಇಡುವುದು – ರಾಮಾನುಜ ದಾಸನ್, ಶ್ರಿವೈಷ್ಣವ ದಾಸನ್, ಮಧುರಕವಿ ದಾಸನ್.
    • ಮಂತ್ರ – ಮಂತ್ರೋಪದೇಶಮ್ – ಆಚಾರ್ಯರಿಂದ ರಹಸ್ಯ ಮಂತ್ರೋಪದೇಶ ಪಡೆಯುವುದು – ಮಂತ್ರ ಎಂದರೆ ದುಃಖ/ಸಂಕಟವನ್ನು ಶಮನಗೊಳಿಸುವ ಶಕ್ತಿ. ಕೆಳಗಿನ 3 ರಹಸ್ಯ ಮಂತ್ರಗಳು ನಮ್ಮನ್ನು ಸಂಸಾರ ಬಂಧನದಿಂದ ಬಿಡುಗಡೆ ಮಾಡುತ್ತದೆ:
      • ತಿರುಮಂತ್ರಮ್
      • ದ್ವಯಮ್
      • ಚರಮಶ್ಲೋಕಮ್
    • ಯಾಗ – ದೇವ ಪೂಜಾ – ತಿರುವಾರಾಧನ ಕ್ರಮವನ್ನು ಕಲಿಯುವುದು
    • ಹೆಚ್ಚಿನ ವಿವರಗಳಿಗಾಗಿ – https://granthams.koyil.org/2015/12/rahasya-thrayam/
  • ಕೈಂಕರ್ಯಮ್ – ಭಗವಾನ್, ಆಳ್ವಾರ್, ಆಚಾರ್ಯನ್, ಭಾಗವತರ ಸೇವೆ
  • ತಿರುವಾರಾಧನಮ್ – ಎಂಪೆರುಮಾನ್ ಪೂಜೆ
  • ತಿರುವುಳ್ಳಮ್ – ದೈವಿಕ ಹೃದಯ / ಬಯಕೆ
  • ಶೇಷಿ – ಒಡೆಯ/ಯಜಮಾನ
  • ಶೇಷ – ಸೇವಕ
  • ಶೇಷತ್ವಮ್ – ಎಂಪೆರುಮಾನ್ ಸೇವೆಗೆ ಸಿದ್ಧವಾಗಿ ಇರುವುದು
  • ಪಾರತಂತ್ರಿಯಮ್ – ಎಂಪೆರುಮಾನ್  (ಭಗವಂತ) ಸೇವೆಗೆ ಸಂಪೂರ್ಣವಾಗಿ ಮೀಸಲಾಗಿರುವುದು
  • ಸ್ವಾತಂತ್ರಿಯಮ್ – ಸ್ವತಂತ್ರ
  • ಪುರುಷಕಾರಮ್ – ಶಿಫಾರಸು/ಸೂಚನೆ/ಸಮಾಧಾನ – ಅರ್ಹತೆ ಇಲ್ಲದ ಜೀವಾತ್ಮಾವನ್ನು ಒಪ್ಪಿಕೊಳ್ಳಲು ಶ್ರೀ ಮಹಾಲಕ್ಷ್ಮೀ ಅಮ್ಮನವರು (ತಾಯಾರ್), ಎಂಪೆರುಮಾನಿಗೆ (ಭಗವಂತ) ಶಿಫಾರಸು ಮಾಡುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಆಚಾರ್ಯರನ್ನು ಶ್ರೀ ಮಹಾಲಕ್ಷ್ಮೀ ಅಮ್ಮನವರ (ತಾಯಾರ್) ಪ್ರತಿನಿಧಿ ಎಂದು ಪರಿಗಣಿಸಲಾಗಿದೆ. ಇದನ್ನು ಯಾರು ನಿರ್ವಹಿಸುತ್ತಾರೋ, ಅವರಿಗೆ ಕೆಳಗಿನ 3 ಗುಣಗಳು ಇರಬೆಕು:
    • ಕೃಪೈ – ಬಳಲುತ್ತಿರುವ ಜೀವಾತ್ಮಗಳ ಮೇಲೆ ಕರುಣೆ.
    • ಪಾರತಂತ್ರಿಯಮ್ – ಎಂಪೆರುಮಾನ್ (ಭಗವಂತ) ಸೇವೆಗೆ ಸಂಪೂರ್ಣವಾಗಿ ಆಶ್ರಿತ ಸ್ಥಿತಿಯಲ್ಲಿ ಇರುವುದು.
    • ಅನನ್ಯರ್ಹತ್ವಮ್ – ಸಂಪೂರ್ಣವಾಗಿ ಎಂಪೆರುಮಾನ್ (ಭಗವಂತ) ಸೇವೆಗೆ ಮೀಸಲಾಗಿರುವುದು
  • ಅನ್ಯ ಶೇಷತ್ವಮ್ – ಯಾರಿಗಾದರೂ ಸೇವೆ ಮಾಡುವುದು (ಎಂಪೆರುಮಾನ್ (ಭಗವಂತ) ಮತ್ತು ಭಾಗವತರನ್ನು ಬಿಟ್ಟು)
  • ವಿಷಯಾಂತರಮ್ – ಲೌಕಿಕ ಸಂತೋಷಗಳು/ ವಿಷಯಗಳು
  • ದೇವತಾಂತರಮ್ – ಬೇರೆ/ಇತರ ಜೀವಾತ್ಮವನ್ನು ದೇವಾ ಎಂದು ತಪ್ಪಾಗಿ ತಿಳಿದುಕೊಳ್ಳುವುದು (ಎಂಪೆರುಮಾನ್ (ಭಗವಂತ) ) ಈ ಲೌಕಿಕ ಪ್ರಪಂಚವನ್ನು ಸುಗಮವಾಗಿ ಕಾರ್ಯಮಾಡಲು ಅನೇಕ ಜೀವಾತ್ಮವನ್ನು ನೇಮಕ ಮಾಡಿದ್ಹಾನೆ. ಅವರುಗಳು ಕೂಡ ಕರ್ಮಾನುಸಾರವಾಗಿ ಈ ಲೌಕಿಕ ಪ್ರಪಂಚಕ್ಕೆ ಬದ್ಧರಾಗಿರುತ್ತಾರೆ
  • ಸ್ವಗತ ಸ್ವೀಕಾರಮ್ – ಎಂಪೆರುಮಾನ್ (ಭಗವಂತ)/ಆಚಾರ್ಯರನ್ನು ಒಪ್ಪಿಕೊಳ್ಳುವುದು
  • ಪರಗತ ಸ್ವೀಕಾರಮ್ – ಭಗವಾನ್/ಆಚಾರ್ಯ ಅವರ ಸ್ವೈಚ್ಚೆ ಇಂದ ನಮ್ಮನ್ನು ಒಪ್ಪಿಕೊಳ್ಳುವುದು..
  • ನಿರ್ಹೇತುಕ ಕೃಪಾ – ಜೀವಾತ್ಮನ ಪ್ರಚೋದನೆ ಇಲ್ಲದೆ ಭಗವಂತನ ನಿರಂತರ ಕರುಣೆ
  • ಸಹೇತುಕ ಕೃಪಾ – ಜೀವಾತ್ಮನ ಸ್ವಂತ ಪ್ರಯತ್ನದಿಂದ ಭಗವಂತನ ನಿರಂತರ ಕರುಣೆಗೆ ಪ್ರಚೋದಿಸುವುದು
  • ನಿತ್ಯ – ನಿತ್ಯ ಸೂರಿಯರು – ಪರಮಪದದಲ್ಲಿ ಎಂಪೆರುಮಾನ್  ಸೇವೆ ಸದಾಕಾಲ ನಿರಂತರವಾಗಿ ಮಾಡುವವರು. ಅವರುಗಳು ಸದಾಕಾಲ ಶುದ್ಧ ಮತ್ತು ಶಾಶ್ವತವಾಗಿ ಪರಮಪದದಲ್ಲಿ ಇರುವವರು
  • ಮುಕ್ತ – ಲೌಕಿಕ ಪ್ರಪಂಚದಲ್ಲಿ ಸಿಲುಕಿಕೊಂಡು ಕ್ರಮೇಣ ಕರ್ಮಗಳಿಂದ ಮುಕ್ತನಾಗಿ ಪರಮಪದವನ್ನು ಸೇರುವ ಜೀವಾತ್ಮ. ಇದರಿಂದ ಅವರುಗಳು ಸದಾಕಾಲ ಶುದ್ಧ ಮತ್ತು ಶಾಶ್ವತವಾಗಿ ಪರಮಪದದಲ್ಲಿ ಇರುವವರು
  • ಬದ್ದ – ಲೌಕಿಕ ಪ್ರಪಂಚದಲ್ಲಿ ಸಿಲುಕಿಕೊಂಡಿರುವವರು – ಸಂಸಾರಿ
  • ಮುಮುಕ್ಷು – ಮೋಕ್ಷವನ್ನು ಇಚ್ಚೇ ಪಡುವವರು
  • ಪ್ರಪನ್ನ – ಎಂಪೆರುಮಾನ್/ಭಗವಂತನಿಗೆ ಶರಣಾಗತನಾಗಿರುವವ:
    • ಆರ್ತ ಪ್ರಪನ್ನ – ಲೌಕಿಕ ಪ್ರಪಂಚದ ದುಃಖಗಳಿಂದ ಒಮ್ಮೆಗೆ ಬಿಡುಗಡೆ/ಮುಕ್ತಿ ಪಡೆಯಬೇಕು ಎಂಬ ಇಚ್ಚೇ ಉಳ್ಳವವರು
    • ದ್ರುಪ್ತ ಪ್ರಪನ್ನ – ಭಗವಂತನಲ್ಲಿ ಶರಣಾಗತಿಯಾಗಿ, ಭಗವಂತನಿಗೂ ಮತ್ತು ಭಾಗವತರಿಗೂ ಸ್ವಲ್ಪ ಕಾಲ ಈ ಲೌಕಿಕ ಪ್ರಪಂಚದಲ್ಲಿ ಸೇವೆ ಮಾಡಿ, ನಂತರ ಕ್ರಮೇಣ ಪರಮಪದದಲ್ಲಿ ಸೇವೆ ಮಾಡಲು ಇಚ್ಚೇ ಉಳ್ಳವರು
  • ತೀರ್ಥಮ್ – ಪವಿತ್ರ ತೀರ್ಥ
  • ಶ್ರೀಪಾದ ತೀರ್ಥಮ್ – ಚರಣಾಮೃತಮ್  – ಆಚಾರ್ಯನ್ ಕಮಲ ಪಾದಗಳನ್ನು ತೊಳೆದಿರುವ ನೀರು/ತೀರ್ಥ
  • ಭೋಗಮ್ – ಭಗವಂತನಿಗೆ ನೈವೆದ್ಯಕ್ಕೆ ಇರುವ ಆಹಾರ (ಅಥವಾ ಯಾವುದಾದರು ತಿನ್ನುವ ಪದಾರ್ಥ)
  • ಪ್ರಸಾದಮ್ – ಭಗವಂತನಿಗೆ ನೈವೆದ್ಯವಾಗಿರುವ ಆಹಾರ. ಇದನ್ನು ತರುವಾಯ ಶ್ರೀ ವೈಷ್ಣವರು ಸೇವಿಸುತ್ತಾರೆ
  • ಉಚ್ಚಿಷ್ಟಮ್– ಉಳಿದಿರುವ ಪ್ರಸಾದಮ್ – ವಿನಿಯೋಗವಾಗಿ ಉಳಿದಿರುವ ಪ್ರಸಾದ – ಮತ್ತವರು ಉಂಡು ಉಳಿದಿರುವ ಪ್ರಸಾದವೆಂದು ಅರ್ಥವಾಗುತ್ತದೆ. ಸಂದರ್ಭವನ್ನು ನೋಡಿ ಅರ್ಥವನ್ನು ತಿಳಿಯಬೇಕು
  • ಪಡಿ – ಭೋಗಮ್
  • ಸಾತ್ತುಪ್ಪಡಿ – ತೇದ ಶ್ರೀಗಂಧ
  • ಶಟಾರಿ, ಶ್ರೀ ಸಟಕೋಪಮ್, ಇತ್ಯಾದಿ. – ಶ್ರೀಮನ್ ನಾರಾಯಣನ ಪಾದ ಕಮಲಗಳು. ನಮ್ಮಾಳ್ವಾರರನ್ನು ಶ್ರೀ ಸಟಕೋಪಮ್ ಎಂದು ಕರೆಯಲಾಗುತ್ತದೆ. ಅವರನ್ನು ಎಂಪೆರುಮಾನ್ ಪಾದ ಕಮಲಗಳೆಂದು ಪರಿಗಣಿಸಲಾಗಿದೆ
    ಮದುರಕವಿಗಳ್ – ನಮ್ ಆಳ್ವಾರ್ ಪಾದ ಕಮಲ.

    • ಶ್ರೀ ರಾಮಾನುಜಮ್ – ನಮ್ ಆಳ್ವಾರ್ ಪಾದ ಕಮಲ ಆಳ್ವಾರ್ ತಿರುನಗರಿಯಲ್ಲಿ
    • ಶ್ರೀ ರಾಮಾನುಜಮ್ – ಎಲ್ಲಾ ಆಳ್ವಾರರ ಪಾದ ಕಮಲ
    • ಮುದಲಿಯಾಣ್ಡಾನ್ – ಶ್ರೀ ರಾಮಾನುಜರ ಪಾದ ಕಮಲ
    • ಪೊನ್ನಡಿಯಾಮ್ ಸೆನ್ಕಮಲಮ್ – ಮಾಮುನಿಗಳ ಪಾದ ಕಮಲ
    • ಸಾಮಾನ್ಯವಾಗಿ ಪಟ್ಟ/ವಿಶ್ವಾಸಉಳ್ಳ ಶಿಷ್ಯನನ್ನು ಗುರುಗಳ ಪಾದ ಕಮಲವೆಂದು ಪರಿಗಣಿಸಲಾಗುತ್ತದೆ. ಉದಾಹರಣೆ: ಪರಾಸರ ಭಟ್ಟರ್, ಎಂಬಾರರ  ಪಾದ ಕಮಲ, ನನ್ಜೀಯರ್ ಭಟ್ಟರರ ಪಾದ ಕಮಲ, ನಂಪಿಳ್ಳೈ ನನ್ಜೀಯರರ ಪಾದ ಕಮಲ, ಇತ್ಯಾದಿ…
  • ವಿಭೂತಿ – ಸಂಪತ್ತು/ಸಿರಿ
  • ನಿತ್ಯ ವಿಭೂತಿ – ಪರಮಪದಮ್/ಶ್ರೀವೈಕುಂಟಮ್
  • ಲೀಲಾ ವಿಭೂತಿ – ಸಂಸಾರ – ಲೌಕಿಕ ಸಂತೋಷಗಳು/ ಲೌಕಿಕ ಪ್ರಪಂಚ
  • ಅಡಿಯೇನ್, ದಾಸನ್ – ನಾನು/ನನ್ನ ಅನ್ನುವ ಬದಲಿಗೆ ವಿನಮ್ರವಾಗಿ ಹೇಳುವುದು
  • ದೇವರೀರ್, ದೇವರ್, ಶ್ರೀಮಾನ್ – ಮತೊಬ್ಬ ಶ್ರೀವೈಷ್ಣವರನ್ನು ಕರೆಯುವ ವಿಧಿ – ನಿಮ್ಮ ಕೃಪೆ
  • ಎಳ್ಹುನ್ದರಳುತಲ್ – ಬರಬೇಕು, ಕುಳಿತುಕೊಳಬೇಕು
  • ಕಣ್ ವಳರುತಲ್ – ನಿದ್ರಾವಸ್ಥೆ
  • ನೀರಾಟ್ಟಮ್ – ಸ್ನಾನ
  • ಶಯನಮ್ – ವಿಶ್ರಮಿಸು
  • ಶ್ರೀಪಾದಮ್ – ಪಲ್ಲಕ್ಕಿಯಲ್ಲಿ ಭಗವಾನ್/ಆಳ್ವಾರ್/ಆಚಾರ್ಯರನ್ನು ಒಯ್ಯುವುದು
  • ತಿರುವಡಿ – ಪಾದ ಕಮಲ (ಹನುಮಂತ ಎಂದು ಆಗುತ್ತದೆ)
  • ವ್ಯಾಖ್ಯಾನಮ್ – ವ್ಯಾಖ್ಯಾನ
  • ಉಪನ್ಯಾಸಮ್ – ಉಪನ್ಯಾಸ
  • ಕಾಲಕ್ಷೇಪಮ್ – ಗ್ರಂಥಗಳಲ್ಲಿ ಇರುವುದನ್ನು ಓದಿ, ಅದರ ಮೂಲ ಪಠ್ಯದ ಆಧಾರದಮೆಲೆ, ಅರ್ಥ ಮತ್ತು ವಿವರಣೆಯನ್ನು ಕೊಡುವುದು
  • ಅಶ್ಟ ದಿಗ್ಗಜರ್ – ಶಿಷ್ಯರನ್ನು ಶ್ರೀವೈಷ್ಣವ ಸಂಪ್ರದಾಯಕ್ಕೆ ಉಪಕ್ರಮಿಸಲು ಮತ್ತು ಸತ್ ಸಂಪ್ರದಾಯವನ್ನು ವ್ಯಾಪಕವಾಗಿ ಪ್ರಚಾರಮಾಡಲು, ಮಣವಾಳ ಮಾಮುನಿಗಳವರು 8 ಆಚಾರ್ಯರುಗಳನ್ನು ಸ್ಥಾಪಿಸಿದರು.
  • 74 ಸಿಂಹಾಸನಾಧಿಪತಿ – ಶಿಷ್ಯರನ್ನು ಶ್ರೀವೈಷ್ಣವ ಸಂಪ್ರದಾಯಕ್ಕೆ ಉಪಕ್ರಮಿಸಲು ಮತ್ತು ಸತ್ ಸಂಪ್ರದಾಯವನ್ನು ವ್ಯಾಪಕವಾಗಿ ಪ್ರಚಾರಮಾಡಲು, ಶ್ರಿ ರಾಮಾನುಜರು 74 ಆಚಾರ್ಯರುಗಳನ್ನು ಸ್ಥಾಪಿಸಿದರು.

ತತ್ವಶಾಸ್ತ್ರದ ಸಂಬಂಧಿತ ಪದಗಳು:

  • ವಿಶಿಷ್ಟಾದ್ವೈತಮ್ – ಬ್ರಹ್ಮಮ್ (ಭಗವಾನ್)/ ಭಗವಂತನ ಚಿತ್ ಮತ್ತು ಅಚಿತ್ ಲಕ್ಷಣಗಳನ್ನು ವಿವರಿಸುವ ತತ್ವಶಾಸ್ತ್ರ
  • ಸಿದ್ಧಾಂತಮ್ – ಸಿದ್ಧಾಂತ
  • ಮಿಥುನಮ್ – ದ೦ಪತಿಗಳು – ಪೆರುಮಾಳ್ ಮತ್ತು ಪಿರಾಟ್ಟಿ
  • ಏಕಾಯನಮ್ – ನಾರಾಯಣನ ಶ್ರಿಯ:ಪತಿತ್ವಕ್ಕೆ (ಶ್ರೀ ಮಹಾಲಕ್ಷ್ಮೀ ಅಮ್ಮನವರ ಒಡೆಯ) ಪ್ರಾಮುಖ್ಯತೆ ನೀಡದೆ, ಅವನ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದು
  • ಮಾಯಾವಾದಮ್ –
  • ಆಸ್ತಿಕ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಳ್ಳುವವರು
  • ನಾಸ್ತಿಕ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಳ್ಳದವರು
  • ಭಾಹ್ಯ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಳ್ಳದವರು
  • ಕುದ್ರುಶ್ಟಿ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಂಡು, ಅನುಕೂಲಕ್ಕೆತಕ್ಕಂತೆ ತಪ್ಪು ಅರ್ಥಕೊಡುವುದು
  • ಆಪ್ತ – ನಂಬಲಾರ್ಹ ಮೂಲ/ಜೊತೆ
  • ಪ್ರಮಾ – ಮಾನ್ಯ ಜ್ಞಾನ
  • ಪ್ರಮೇಯಮ್ – ಮಾನ್ಯ ಜ್ಞಾನದ ವಸ್ತು
  • ಪ್ರಮಾತಾ – ಮಾನ್ಯ ಜ್ಞಾನವನ್ನು ಕೊಡುವವರು
  • ಪ್ರಮಾಣಮ್ – ಮಾನ್ಯ ಜ್ಞಾನವನ್ನು ಪಡೆಯವ ರೀತಿ/ಮಾರ್ಗ
    • ಪ್ರತ್ಯಕ್ಷಮ್ – ಇಂದ್ರಿಯಗಳಿಂದ ನೇರ ವೀಕ್ಷಣೆಯನ್ನು ಪಡೆಯುವುದು
    • ಅನುಮಾನಮ್ – ಹಿಂದಿನ ವೀಕ್ಷಣೆಯ ಆಧಾರದಮೇಲೆ ಪಡೆದ ಜ್ಞಾನ
    • ಶಬ್ದಮ್ – ಶಾಸ್ತ್ರಗಳು ಹೇಳಿರುವ ಪದಗಳು/ವಾಕ್ಯಗಳು
  • ತತ್ವ ತ್ರಯಮ್ – ಪ್ರಪನ್ನನ್ನು ತಿಳಿದುಕೊಳ್ಳಬೇಕ್ಕಾದ 3 ವಾಸ್ತವಿಕತೆ
    • ಚಿತ್, ಚೇತನಮ್, ಜೀವಾತ್ಮಾ – ಆತ್ಮ, ಚೇತನ, ಜೀವಾತ್ಮಾ
    • ಅಚಿತ್, ಅಚೇತನಮ್, ಪ್ರಕ್ರುತಿ – ಭೌತಿಕ ವಸ್ತು, ನಿರ್ಜೀವ
    • ಈಶ್ವರ – ಭಗವಾನ್ ಶ್ರೀಮನ್ ನಾರಾಯಣನ್.
    • ಹೆಚ್ಚಿನ ವಿವರಗಳಿಗಾಗಿ – https://granthams.koyil.org/thathva-thrayam-english/
  • ರಹಸ್ಯ ತ್ರಯಮ್- 3 ರಹಸ್ಯ ಮಂತ್ರಗಳು – ಪಂಚಸಂಸ್ಕಾರದ ಸಮಯದಲ್ಲಿ ಆಚಾರ್ಯರು ಉಪದೇಶ ಮಾಡುವ ಮಂತ್ರಗಳು (ಹೆಚ್ಚಿನ ವಿವರಗಳಿಗಾಗಿ – https://granthams.koyil.org/2015/12/rahasya-thrayam/).
    • ತಿರುಮಂತ್ರಮ್ – ಅಷ್ಟಾಕ್ಷರ ಮಹಾ ಮಂತ್ರ
    • ದ್ವಯಮ್- ದ್ವಯ ಮಹಾ ಮಂತ್ರಮ್
    • ಚರಮ ಸ್ಲೋಕಮ್- “ಸರ್ವ ದರ್ಮಾನ್ ಪರಿತ್ಯಜ್ಯ…” ಗೀತಾ ಸ್ಲೋಕ. ರಾಮ ಚರಮ ಸ್ಲೋಕ (ಸಕ್ರುದೇವ ಪ್ರಪನ್ನಾಯ) ಮತ್ತು ವರಾಹ ಚರಮ ಸ್ಲೋಕ (ಸ್ತಿತೇ ಮನಸಿ).
  • ಅರ್ತ ಪಂಚಕಮ್ – 5 ಅಗತ್ಯಯುಳ್ಳ ತತ್ವಗಳು – ಪಂಚಸಂಸ್ಕಾರದ ಸಮಯದಲ್ಲಿ ಆಚಾರ್ಯರು ಉಪದೇಶ ಮಾಡುವರು (ಹೆಚ್ಚಿನ ವಿವರಗಳಿಗಾಗಿ – https://granthams.koyil.org/2015/12/artha-panchakam/).
    • ಜೀವಾತ್ಮಾ- ಚೇತನಾತ್ಮಕ
    • ಪರಮಾತ್ಮಾ – ಭಗವಾಂತ
    • ಉಪೇಯಮ್, ಪ್ರಾಪ್ಯಮ್ – ಸಾಧಿಸಬೆಕಾದ ಗುರಿ – ಕೈಂಕರ್ಯಮ್
    • ಉಪಾಯಮ್ – ಗುರಿಯನ್ನು ಸಾಧಿಸಲು ಹಿಡಿದಿರುವ/ಉಪಯೊಗಿಸುವ ಮಾರ್ಗ
    • ವಿರೋಧಿ – ಗುರಿಯನ್ನು ಸಾಧಿಸುವಾಗ ಬರುವ ಅಡಚಣೆಗಳು
  • ಆಕಾರ ತ್ರಯಮ್ – ಜೀವಾತ್ಮಾ ಅವಶ್ಯವಾಗಿ ತಿಳಿದುಕೊಳ್ಳಬೆಕಾದ 3 ಗುಣಗಳು:
    • ಅನನ್ಯ ಶೇಷತ್ವಮ್– ಭಗವಂತನೊಬ್ಭನೆ ಒಡೆಯನೆಂದು ಒಪ್ಪಿಕೊಳ್ಳುವುದು
    • ಅನನ್ಯ ಶರಣತ್ವಮ್ – ಭಗವಂತನೊಬ್ಭನೆ ಆಶ್ರಯ
    • ಅನನ್ಯ ಭೋಗ್ಯತ್ವಮ್ – ಭಗವಂತನೊಬ್ಭನೆ ಸಂತೋಶವನ್ನು ಅನುಭವಿಸುವುದು
  • ಸಾಮಾನಾದಿಕರಣ್ಯಮ್- ಒಂದು ಅಥವಾ ಹೆಚ್ಚಿನ ಲಕ್ಷಣ/ಗುಣಗಳಿಗೆ ಒಂದೇ ತಳಹದಿ/ಆಧಾರ ಹೊಂದಿರುವುದು. ಉದಾಹರಣೆ: ಮ್ರುದ್ ಗಟಮ್ (ಮಣ್ಣಿನ ಮಡಿಕೆ) – ಮಡಿಕೆ ಆಧಾರ, ಮಣ್ಣು ಮತ್ಹು ಮಡಿಕೆ 2 ಲಕ್ಷಣಗಳು. ಮತ್ತೊಂದು ಉದಾಹರಣೆ: “ಶುಕ್ಲ: ಪಟ:” (ಬಿಳಿ ಬಟ್ಟೆ) – ಬಟ್ಟೆ ಆಧಾರವಾಗುವುದು, ಇದರಲ್ಲಿ 2 ಗುಣ/ಲಕ್ಷಣ ಇದೆ “ಬಿಳಿ” & “ಬಟ್ಟೆ”. ಸಾಮಾನಾದಿಕರಣ್ಯಮ್ ಎನ್ನುವುದು ಒಂದು ವಿವರವಾದ ವಿಷಯ, ಸಂಸ್ಕ್ರತ ವಿದ್ವಾಂಸರಿಂದ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬಹುದು.
  • ವೈಯದಿಕರಣ್ಯಮ್ – ಎರಡು ಅಥವಾ ಹೆಚ್ಚಿನ ಅಂಶಗಳಿಗೆ ವಿವಿಧ ಆಧಾರ/ತಳಹದಿಗಳು. ಇದರ ವಿವರವಾದ ವಿಷಯ, ಸಂಸ್ಕ್ರತ  ವಿದ್ವಾಂಸರಿಂದ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬಹುದು.
  • ಸಮಶ್ಟಿ ಸೃಷ್ಟಿ – ಭಗವಂತನು ಪಂಚ ಭೂತಗಳಿಂದ ಸೃಷ್ಟಿ ಮಾಡಿ, ಅದಕ್ಕೆ ಬ್ರಹ್ಮನಾಗಿ/ಬ್ರಹ್ಮನಂತೆ ಜೀವಾತ್ಮವನ್ನು ಇಡುತ್ತಾನೆ. ಇಲ್ಲಿಯವರೆಗೆ ಸಮಷ್ಟಿ ಸೃಷ್ಟಿ ಎಂದು ಕರಿಯಲ್ಪಡುತ್ತದೆ.
  • ವ್ಯಶ್ಟಿ ಸೃಷ್ಟಿ – ಭಗವಂತನು ಬ್ರಹ್ಮನಿಗೆ, ಋಷಿಗಳಿಗೆ,ಇತ್ಯಾದಿ.., ಇವರುಗಳಿಗೆ (ಅಂತರ್ಯಾಮಿಯಾಗಿ ಇದ್ದುಕೊಂಡು) ವಿವಿಧವರ್ಣದ ರೂಪಗಳನ್ನು ಒಂದಿರುವ ಸೃಷ್ಟಿಗಳನ್ನು ಸೃಷ್ಟಿಸಲು ಅಧಿಕಾರ ನೀಡುವನು.
  • ವ್ಯಶ್ಟಿ ಸಂಹಾರಮ್- ಭಗವಂತನು ರುದ್ರರಿಗೆ (ಶಿವ), ಅಗ್ನಿ ದೇವರಿಗೆ , ಇತ್ಯಾದಿ, ಇವರುಗಳಿಗೆ (ಅಂತರ್ಯಾಮಿಯಾಗಿ ಇದ್ದು ಕೊಂಡು) ನಾಶಮಾಡುವ ಅಧಿಕಾರ ನೀಡುವನು
  • ಸಮಶ್ಟಿ ಸಂಹಾರಮ್ – ಭಗವಂತನೆ ಎಲ್ಲಾ ಪಂಚ ಭೂತಗಳಿಂದ ಸೃಷ್ಟಿಸಿರುವ ಸೃಷ್ಟಿಯನ್ನು ಮತ್ತಿತರ ಎಲ್ಲಾ ಸೃಷ್ಟಿಗಳನ್ನು ತಾನೆ ನಾಶ ಮಾಡುವನು.

ಹೆಚ್ಚಿನ ವಿವರಗಳಿಗೆ: https://kaarimaaran.com/downloads/

ಆಳ್ವಾರ್ ತಿರುವಡಿಗಳೇ ಶರಣಮ್
ಎಂಪೆರುಮಾನಾರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್

ಅಡಿಯೆನ್ ಶ್ರೀನಿವಾಸನ್ ರಾಮಾನುಜ ದಾಸನ್

ಮೂಲ: https://granthams.koyil.org/readers-guide-english/

ರಕ್ಷಿತ ಮಾಹಿತಿ:  https://granthams.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – https://granthams.koyil.org

ಪ್ರಮಾತಾ (ಭೋಧಕರು) – https://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org

Leave a Comment