ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೮

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಕಿಡಾಂಬಿ ನಾಯನಾರರಿಂದ ಶ್ರೀ ಭಾಷ್ಯಮ್ ವ್ಯಾಖ್ಯಾನವನ್ನು ಆಲಿಸಿದ ನಾಯನಾರರು

ಅಲ್ಲಿ [ಕಾಂಚಿಪುರಂನಲ್ಲಿ], ಅವರು ಕಿಡಾಂಬಿ ಆಚ್ಚಾನ್ ದೈವಿಕ ಕುಲದಲ್ಲಿ ಕೊಂಡಾಡಿದ ಕಿಡಾಂಬಿ ನಾಯನಾರರ ದಿವ್ಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು [ತಿರುಕ್ಕೊಟ್ಟಿಯೂರ್ ನಂಬಿ ಅವರು ಮಡಪ್ಪಳ್ಳಿ ಕೈಂಕರ್ಯವನ್ನು (ಪ್ರಸಾದದ ನೈವೇದ್ಯಕ್ಕೆ ಅಡುಗೆ ) ಉಡೈವರಿಗಾಗಿ ಮಾಡಲು ನೇಮಿಸಿದವರು. ಅವರ ಜೊತೆಗೆ, ಇತರ ಇಬ್ಬರು ಶಿಷ್ಯರು, ಐಯೈಗಳ್ ಅಪ್ಪ ಮತ್ತು ಸೆಲ್ವನಾಯನರು ಕೂಡ ಕಿಡಾಂಬಿ ನಾಯನಾರರಿಂದ ಶ್ರೀಭಾಷ್ಯಮ್ ವ್ಯಾಖ್ಯಾನವನ್ನು ಕೇಳಿದರು. ಅವರು ನಾಯನಾರರನ್ನು ತುಂಬಾ ಬೆಂಬಲಿಸುತ್ತಿದ್ದರು ಮತ್ತು ಶ್ರೀಭಾಷ್ಯ ಕಾಲಕ್ಷೇಪವನ್ನು (ಆಂತರಿಕ ವಿವರಣೆ) ಕೇಳುತ್ತಿದ್ದರು. ನಾಯನಾರರ ಮಾತಿನ ಶಕ್ತಿಯನ್ನು ನೋಡಿ ಐಯೈಗಳ್ ಅಪ್ಪ ಆಶ್ಚರ್ಯಚಕಿತರಾದರು. ಒಂದು ದಿನ ಅವರು ತಮ್ಮ ಆಲೋಚನೆಗಳನ್ನು ಕಿಡಾಂಬಿ ನಾಯನಾರರಿಗೆ ತಿಳಿಸಿದರು “ದೇವರೀರ್ ಅವರು ತಮ್ಮ ಸಾಮರ್ಥ್ಯಗಳಿಗೆ ಹೊಂದಿಕೆಯಾಗುವ ಅರ್ಥಗಳನ್ನು ಅವರಿಗೆ ಕಲಿಸುತ್ತಿರುವಂತೆ ಕಾಣುತ್ತಿಲ್ಲ”.

ಕಿಡಾಂಬಿ ನಾಯನಾರ್ , “ನೀನು ನಾಳೆ ಅವನನ್ನು ಪರೀಕ್ಷಿಸು” ಎಂದು ಐಯೈಗಳ್ ಅಪ್ಪನಿಗೆ ಹೇಳಿ ಕೆಲವು ಸುಳಿವುಗಳನ್ನು ಹೇಳಿದರು . ಐಯೈಗಳ್ ಅಪ್ಪ, ಸಂಪೂರ್ಣ ಪರಿಣಿತರಾಗಿದ್ದರಿಂದ, ಮರುದಿನ ನಾಯನಾರನ್ನು ಪರೀಕ್ಷಿಸಲು ಸಿದ್ಧನಾಗಿದ್ದರು .
ನಾಯನಾರ್ ಮರುದಿನ ತಮ್ಮ ಉಪನ್ಯಾಸಗಳ ಮೂಲಕ ಮೊದಲ ಪಾಠದ ಪರಿಕಲ್ಪನೆಗಳನ್ನು ಸಾವಿರ ಪಟ್ಟು ಹೆಚ್ಚು ವಿವರಿಸಿದರು.ಇದನ್ನು ಕೇಳಿದ ಅಯ್ಯೈಗಳ್ ಅಪ್ಪ, “ದೇವರೀರ್ ಅವರು ಕಿಡಾಂಬಿ ನಾಯನಾರ್ ನಮಗೆ ಹೇಳಿದ ಎಲ್ಲಾ ವಿವರಣೆಗಳನ್ನು ನೀಡಿದ್ದಾರೆ, ಮತ್ತು ಅದಕ್ಕಿಂತ ಹೆಚ್ಚಾಗಿ, ದೇವರೀರ್ ಅವರು ನಮಗೆ ವಿಶೇಷ ಅರ್ಥಗಳನ್ನು ನೀಡಿದ್ದಾರೆ” ಎಂದು ಉದ್ಗರಿಸಿದರು. ಅವರು ಪರಮಾನಂದಗೊಂಡರು. ಇದನ್ನು ಕೇಳಿ ಕಿಡಾಂಬಿ ನಾಯನಾರ್ ಕರುಣೆಯಿಂದ ಅಲ್ಲಿಗೆ ಬಂದರು. ಅವರ ಶಿಷ್ಯಗೋಷ್ಟಿಯಲ್ಲಿ (ಶಿಷ್ಯರ ಸಭೆ), ನಾಯನಾರೊಂದಿಗೆ ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ ಕೆಲವು ವಿಧ್ವಾನರು (ಹೆಚ್ಚು ವಿದ್ವಾಂಸರು) ಇದ್ದರು. ನಾಯನಾರ್ ಐಯೈಗಳ್ ಅಪ್ಪಾಗೆ ವಿನಮ್ರತೆಯಿಂದ ಹೇಳಿದರು, “ಅಡಿಯೇನರ ಆಚಾರ್ಯರು ಇತರ ತತ್ವಶಾಸ್ತ್ರಗಳ ಜನರೊಂದಿಗೆ ಸಂಪರ್ಕ ಸಾಧಿಸುವುದನ್ನು ನಿಷೇಧಿಸಿದ್ದಾರೆ” ಎಂದು ಆಳ್ವಾರ್ ತಿರುನಗರಿಯಲ್ಲಿ ತಿರುವಾಯ್ಮೊಳಿ ಪಿಳ್ಳೈ ಅವರ ಮಾತನ್ನು ನೆನಪಿಸಿಕೊಂಡರು. ಐಯೈಗಳ್ ಅಪ್ಪಾ ಅವರಿಗೆ “ಆದರೆ ಈ ಜನರು ಶ್ರೀವೈಷ್ಣವರಲ್ಲವೇ! ಅವರೊಂದಿಗೆ ಚರ್ಚಿಸುವುದರಿಂದ, ಒಬ್ಬರ ಸ್ವರೂಪಕ್ಕೆ (ಮೂಲ ಸ್ವಭಾವ) ಯಾವುದೇ ಸಮಸ್ಯೆ ಇರುವುದಿಲ್ಲ. ದಯವಿಟ್ಟು ಅವರ ಆಸೆಯನ್ನು ಪೂರೈಸಿಕೊಳ್ಳಿ” ಎಂದು ಹೇಳಿದರು.ನಾಯನಾರ್ ಅವರಿಗೆ ತರ್ಕ, ಅರ್ಥಗಳು ಮತ್ತು ತತ್ತ್ವಶಾಸ್ತ್ರದ ಕುರಿತು ಉಪನ್ಯಾಸ ನೀಡಿದರು. ಅವರು ನಾಯನಾರ್ ಅವರ ಮಾತುಗಳನ್ನು ಕೇಳಿದ ನಂತರ ಅವರನ್ನು ಹೊಗಳಿದರು ಮತ್ತು ಅವರ ದಿವ್ಯ ಪಾದಗಳಿಗೆ ನಮಸ್ಕರಿಸಿದರು. ನಂತರ ಅವರು ಕಿಡಾಂಬಿ ನಾಯನಾರ್‌ಗೆ “ಅವರು ಇತರರಂತೆ ಸಾಮಾನ್ಯ ಶಿಷ್ಯ ಎಂದು ನಾವು ಭಾವಿಸಿದ್ದೇವೆ. ಎಲ್ಲಾ ಶಾಸ್ತ್ರಗಳು ಅವರಲ್ಲಿ ನೆಲೆಸಿವೆ” ಎಂದು ಹೇಳಿದರು. ಕಿಡಾಂಬಿ ನಾಯನಾರ್‌ ಅವರಿಗೆ “ಅವರನ್ನು ಅವತಾರವೆಂದು ಭಾವಿಸಿ” ಎಂದು ಹೇಳಿದರು. ನಂತರದ ವರ್ಷಗಳಲ್ಲಿ ಅರುಳಿಚ್ಚೆಯಲ್‌ಗಳ ಅರ್ಥಗಳನ್ನು ಅವರ ಮೂಲಕ ಹರಡುವ ಉದ್ದೇಶದಿಂದ, ಕಿಡಾಂಬಿ ನಾಯನಾರ್‌ ಹೆಚ್ಚಿನ ಪ್ರಚೋದನೆಯಿಂದ ಅವರಿಗೆ ಶ್ರೀಭಾಷ್ಯವನ್ನು ಕಲಿಸಲು ಪ್ರಾರಂಭಿಸಿದರು. ನಾಯನಾರ್‌ ಹಲವಾರು ಬಾರಿ ಈಡು ವ್ಯಾಖ್ಯಾನವನ್ನು ಕಂಠಪಾಠ ಮಾಡುತ್ತಿದ್ದರು. ಇದನ್ನು ಕೇಳಿದ ಕಿಡಾಂಬಿ ನಾಯನಾರ್ ಒಂದು ದಿನ ನಾಯನಾರ್ ಒಬ್ಬಂಟಿಯಾಗಿದ್ದಾಗ ಅವರನ್ನು ಭೇಟಿಯಾಗಿ ಹೇಳಿದರು, “ದೇವರೀರ್ ಅವರಿಗೆ ಮುಪ್ಪತ್ತಾರಾಯಿರ ಪೆರುಕ್ಕರ್ ಎಂಬ ದಿವ್ಯ ಹೆಸರು ಬಂದಿರುವುದು ವ್ಯರ್ಥವಲ್ಲ. ನಾವು ಬೇರೆಲ್ಲಿಯೂ ಅಂತಹ ಬುದ್ಧಿವಂತಿಕೆಯನ್ನು ನೋಡಿಲ್ಲ. ನಮ್ಮ ಮನಸ್ಸಿನಲ್ಲಿ ಒಂದು ಆಸೆ ಇದೆ. ದೇವರೀರ್ ಅದನ್ನು ಖಂಡಿತ ಪೂರೈಸಬೇಕು”. ನಾಯನಾರ್ ಏನು ಮಾಡಬೇಕೆಂದು ಯೋಚಿಸುತ್ತಾ, ಅವರು ಏನು ಬಯಸುತ್ತಾರೆ ಎಂದು ಕೇಳಿದರು. ಕಿಡಾಂಬಿ ನಾಯನಾರ್ ಅವರಿಗೆ ಹೇಳಿದರು, “ದೇವರೀರ್ ಒಂದು ಮಹತ್ವದ ಅವತಾರ ಎಂದು ನಾವು ಕೇಳಿದ್ದೇವೆ. ದಯವಿಟ್ಟು ಅದನ್ನು ನಮ್ಮಿಂದ ಮರೆಮಾಡಬೇಡಿ. ದಯವಿಟ್ಟು ಅದನ್ನು ಬಹಿರಂಗಪಡಿಸಿ” ಎಂದು ನಾಯನಾರ್ ಅವರಿಗೆ ಹೇಳಿದರು, “ದೇವರೀರ್ ಅಡಿಯೇನ್ ರ ಆಚಾರ್ಯರು, ಅಡಿಯೇನ್ ಅದನ್ನು ಮರೆಮಾಡಲು ಸಾಧ್ಯವಿಲ್ಲ. ದಯವಿಟ್ಟು ಪೆರಿಯಪೆರುಮಾಳರ ಆದೇಶವು ಇತರರಿಗೆ ಬಹಿರಂಗವಾಗದಂತೆ ನೋಡಿಕೊಳ್ಳಿ” ಎಂದು ಹೇಳಿದರು. ನಂತರ ಅವರು ಹತ್ತಿರದಲ್ಲಿದ್ದ ದೀಪದ ಪ್ರಕಾಶವನ್ನು ಹೆಚ್ಚಿಸಿದರು, ಕಿಡಾಂಬಿ ನಾಯನಾರ್ ಅವರನ್ನು ಭಯಪಡದಂತೆ ಎಚ್ಚರಿಸಿದರು ಮತ್ತು ಆದಿಶೇಷನ ನಿಜವಾದ ದೈವಿಕ ರೂಪವನ್ನು ಬಹಿರಂಗಪಡಿಸಿದರು. ಕಿಡಾಂಬಿ ನಾಯನಾರ್ ತುಂಬಾ ಭಯಭೀತರಾದರು ಮತ್ತು “ದಯವಿಟ್ಟು ಈ ರೂಪವನ್ನು ಮರೆಮಾಡಿ” ಎಂದು ಕೇಳಿಕೊಂಡರು.ನಾಯನಾರ್ ತಮ್ಮ ನಿಯಮಿತ ರೂಪಕ್ಕೆ ಮರಳಿದರು. ತರುವಾಯ, ಇದನ್ನು ದೇವರಹಸ್ಯ (ಎಂಪೆರುಮಾನನಿಗೆ ಮಾತ್ರ ತಿಳಿದಿರುವ ಅತ್ಯಂತ ರಹಸ್ಯ ಮಾಹಿತಿ) ಎಂದು ಪರಿಗಣಿಸಿ, ಕಿಡಾಂಬಿ ನಾಯನಾರ್ ಅವರು ನಾಯನಾರ್ ಅವರ ಮೇಲೆ ಆಳವಾದ ಪ್ರೀತಿಯನ್ನು ಸುರಿಸಿ, ಅವರ ದೈವಿಕ ರೂಪಕ್ಕೆ ಸೂಕ್ತವಾದ ಆಹಾರವನ್ನು ಅರ್ಪಿಸಿದರು. ಶ್ರೀಭಾಷ್ಯ ಕಾಲಕ್ಷೇಪವು ಪೂರ್ಣಗೊಳ್ಳುವವರೆಗೆ, ಅವರು ತಮ್ಮ ದೈವಿಕ ನಿವಾಸದಲ್ಲಿ ಹಸುಗಳಿಂದ ತೆಗೆದ ಹಾಲನ್ನು ನಾಯನಾರರಿಗೆ ಕಳುಹಿಸಿದರು. ಕೆಲವೇ ದಿನಗಳಲ್ಲಿ, ಶ್ರೀಭಾಷ್ಯವು ಪೂರ್ಣಗೊಂಡಿತು. ಸಂಸ್ಕೃತ ವೇದಾಂತಂ ಮತ್ತು ದ್ರಾವಿಡ ವೇದಾಂತಂ ಎರಡರಲ್ಲೂ ಪರಿಣಿತರಾದ ನಾಯನಾರ್, ಪೆರಿಯಾಳ್ವಾರ್ ಅವರು ತಮ್ಮ ಪೆರಿಯಾಳ್ವಾರ್ ತಿರುಮೊಳಿನಲ್ಲಿ ಹೇಳಿದಂತೆ ದೇವಪ್ಪೆರುಮಾಳ್‌ನ ಮಹಿಮೆಗಳನ್ನು ತಿಳಿಸುತ್ತಾ ಕಾಂಚಿಪುರಂನಲ್ಲಿ ಕೆಲಕಾಲ ತಂಗಿದರು,
“ವೇದಾಂತ ವಿೞು ಪ್ಪೊರುಳಿನ್ ಮೇಲಿರುಂದ ವಿಳಕೈ ವಿಟ್ಟುಶಿತ್ತನ್ ವಿರಿತ್ತನನೇ “. (ವಿಷ್ಣುಚಿತ್ತನ್ (ಪೆರಿಯಾಳ್ವಾರ್) ಉಪನಿಷತ್ತುಗಳ ಅಂತರಂಗದ ಅರ್ಥವಾದ ತೇಜಸ್ವಿ ಎಂಪೆರುಮಾನನನ್ನು ಬಹಿರಂಗಪಡಿಸಿದರು). ಅವರು ಯಥೋಕ್ತಕಾರಿ ಸನ್ನಿಧಿಯಲ್ಲಿ ಶ್ರೀಭಾಷ್ಯ ಮತ್ತು ಭಗವದ್ವಿಷಯದ ಕುರಿತು ಒಂದು ವರ್ಷ, ದಯೆಯಿಂದ ಪ್ರವಚನಗಳನ್ನು ನೀಡಿದ್ದಾರೆ ಎಂದು ಪ್ರಸಿದ್ಧ ವ್ಯಕ್ತಿಗಳಿಂದ ಕೇಳಿ ಬಂದಿದೆ. ಈ ಕಾರಣಕ್ಕಾಗಿಯೇ ಅವರು ಈ ದೇವಾಲಯದಲ್ಲಿ ಅರ್ಚಾ ರೂಪದಲ್ಲಿ ಉಪದೇಶ ಮುದ್ರೆ (ಬೋಧನೆಯ ಸಂಕೇತದಲ್ಲಿ ಕೈಗಳನ್ನು ಹಿಡಿದಿರುವುದು) ಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕಾಂಚೀಪುರಂನಲ್ಲಿ ತಂಗಿದ್ದ ಸಮಯದಲ್ಲಿ, ಆ ಪ್ರದೇಶದಲ್ಲಿ ಭಗವದ್ ವಿಷಯ (ತಿರುವಾಯ್ಮೊಳಿಗೆ ಸಂಬಂಧಿಸಿದ ವಿಷಯಗಳು) ಕುರಿತು ವಿವಿಧ ತಾಳೆಗರಿ ಹಸ್ತಪ್ರತಿಗಳನ್ನು ಹುಡುಕಿದರು ಮತ್ತು ಅವರೊಂದಿಗೆ ಶ್ರೀರಂಗಕ್ಕೆ ತೆರಳಿದರು. ಕೆಳಗಿನ ಶ್ಲೋಕದಲ್ಲಿ ಹೇಳಿರುವಂತೆ.

ತತ: ಪ್ರತಿನಿವೃತ್ತಂತ್ತಂ ಪುರುಷೋ ಭುಜಕೇಶಯ:
ಪ್ರತ್ಯುತ್ಕಮ್ಯ ಪ್ರಭುಸ್ಸ್ವೈರಂ ಪುನಃ ಪ್ರವೇಶಯ್ತ್ಪುರಂ

(ತರುವಾಯ, ಸರ್ಪ ಹಾಸಿಗೆಯ ಮೇಲೆ ಒರಗಿಕೊಂಡಿದ್ದ ಶ್ರೀ ರಂಗನಾಥನು ಆ ಅಳಗಿಯ ಮಣವಾಳ ಪೆರುಮಾಳರನ್ನು ಬರಮಾಡಿಕೊಳ್ಳಲು ಹೋಗಿ ಅವರ ಇಚ್ಛೆಯಂತೆ ಶ್ರೀರಂಗಕ್ಕೆ ಪುನಃ ಪ್ರವೇಶಿಸುವಂತೆ ಮಾಡಿದನು), ಪೆರುಮಾಳರಿಂದ ಬರಮಾಡಿಕೊಂಡ ಅಳಗಿಯ ಮಣವಾಳ ಪೆರುಮಾಳ ನಾಯನಾರ್ ಶ್ರೀರಂಗವನ್ನು ಪುನಃ ಪ್ರವೇಶಿಸಿ ಪೆರುಮಾಳರನ್ನು ಪೂಜಿಸಿದರು, ಅವರು ಅವರಿಗೆ ಪವಿತ್ರ ತೀರ್ಥ ಪ್ರಸಾದವನ್ನು ಅರ್ಪಿಸಲು ತುಂಬಾ ಸಂತೋಷಪಟ್ಟರು. ಆಗ ಪೆರುಮಾಳರು ಅವರಿಗೆ ಹೇಳಿದಂತೆ.

ನಿತ್ಯಂ ರಂಗೇ ನಿವಾಸಾಯ ಪ್ರಾರ್ಥಿತ: ಪಾಣಿಶಾಯಿನಾ
ಪಶ್ಯನ್ ಪದಾಂಬುಜಮ್ ತಸ್ಯ ಪಾಲಯಾಮಾಸ ಶಾಸನಮ್

“ಇನ್ನು ಮುಂದೆ ಈ ಶ್ರೀರಂಗದಲ್ಲಿಯೇ ಇರಿ” ಎಂಬ ಪೆರುಮಾಳರ ಕೋರಿಕೆಯನ್ನು ಮನವಾಳ ಪೆರುಮಾಳರು ಪಾಲಿಸಿದರು), ನಾಯನಾರರು ಪೆರುಮಾಳರ “ಶಾಶ್ವತವಾಗಿ ಇಲ್ಲಿಯೇ ಇರಿ” ಎಂಬ ಆದೇಶಕ್ಕೆ ಒಪ್ಪಿದರು. ಅಲ್ಲಿದ್ದ ಎಲ್ಲಾ ಶ್ರೇಷ್ಠ ಜನರು “ದೇವರೀರ್ ಇಲ್ಲಿಯೇ ಇದ್ದು ಪೆರುಮಾಳರನ್ನು ಶಾಶ್ವತವಾಗಿ ಸ್ತುತಿಸಬೇಕು” ಎಂದು ಹೇಳಿದರು, ಅದಕ್ಕೆ ಅವರು ಒಪ್ಪಿದರು. ಪೂರ್ವದಿನಚರ್ಯಾದ 19 ನೇ ಶ್ಲೋಕಕ್ಕೆ ಅನುಗುಣವಾಗಿ.

ಶ್ರೀಮದ್ ರಂಗಮ್ ಜಯತು ಪರಮಮ್ ಧಾಮ ತೇಜೋ ನಿಧಾನಂ
ಭೂಮಾ ತಸ್ಮಿನ್ ಭವತು ಕುಶಲೀ ಕೋಪಿ ಭೂಮಾಸಹಾಯ:
ದಿವ್ಯಮ್ ತಸ್ಮೈ ಧೀಶತು ವಿಭವಂ ದೇಶಿಕೋ ದೇಶಿಕಾನಾಮ್
ಕಾಲೇ ಕಾಲೇ ವರವರಮುನಿ : ಕಲ್ಪಯನ್ ಮಂಗಳಾನಿ

(ಇತರರನ್ನು ಸೋಲಿಸುವ ಸಾಮರ್ಥ್ಯದಿಂದಾಗಿ ಶ್ರೇಷ್ಠ ಸ್ಥಾನಮಾನದಲ್ಲಿರುವ ಶ್ರೀರಂಗವು ಚೆನ್ನಾಗಿ ಬೆಳಗಲಿ. ಪೆರಿಯ ಪೆರುಮಾಳರು ಶ್ರೀದೇವಿ ಮತ್ತು ಭೂದೇವಿಯವರೊಂದಿಗೆ ಅಲ್ಲಿ ಸೂಕ್ತವಾಗಿ ವಾಸಿಸಲಿ. ಆಚಾರ್ಯರಲ್ಲಿ ಮೊದಲಿಗರಾದ ವರವರಮುನಿ (ಅಳಗಿಯ ಮನವಾಳನ್) ಆ ಪೆರುಮಾಳರಿಗೆ ಮಂಗಳಾಶಾಸನ ಮಾಡಿ ಅವರಿಗೆ ಕೀರ್ತಿ ತರಲಿ, ಅವರು ಸೂಕ್ತ ಸಮಯದಲ್ಲಿ ಪೆರುಮಾಳರಿಗೆ ಮಂಗಳಾಶಾಸನ ಮಾಡುತ್ತಲೇ ಇದ್ದರು,ಇದರ ಪರಿಣಾಮವಾಗಿ “ಅರಂಗರ್ ತಂ ಸೀರ್ ತಜ್ಹೈಪ್ಪ” (ಶ್ರೀರಂಗನಾಥನ ದೈವಿಕ ಗುಣಗಳು ಪೋಷಿಸಲ್ಪಟ್ಟವು) ಎಂಬ ವಾಕ್ಯದಲ್ಲಿ ಹೇಳಿದಂತೆ, ಪೆರುಮಾಳರ ದೈವಿಕ ಸಂಪತ್ತು ಹೇರಳವಾಯಿತು, ಅದು ಎಲ್ಲೆಡೆ ತುಂಬಿತು.

ಮೂಲ : https://granthams.koyil.org/2021/08/16/yathindhra-pravana-prabhavam-38-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೮”

Leave a Comment