ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೨

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಆಚ್ಚಿ ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ, ಕಂದಾಡೈ ಅಣ್ಣನ್ ಅವರ ತಂದೆ [ದೇವರಾಜ ತೋಳಪ್ಪರ್] ಅವರ ತೀರ್ಥವನ್ನು (ಶ್ರಾದ್ಧ) ಆಚರಿಸಬೇಕಾಗಿತ್ತು. ಅಣ್ಣನ್ ಶ್ರೀನಾರಾಯಣರ ಪತ್ನಿ ಆಚ್ಚಿಯನ್ನು ಶ್ರೀಗಳಿಗೆ ಅಡುಗೆ ಮಾಡಲು ಬರುವಂತೆ ಕರೆದರು . ಆಚ್ಚಿಯೂ ಅಲ್ಲಿಗೆ ಹೋಗಿ, ಶುದ್ಧತೆ ಮತ್ತು ಆನಂದದಿಂದ ಆಹಾರವನ್ನು ಅಡುಗೆ ಮಾಡಿದಳು . ಎಂಪೆರುಮಾನನಿಗೆ ಆಹಾರವನ್ನು ಅರ್ಪಿಸಿದ ನಂತರ, ಅವರು ಶ್ರೀವೈಷ್ಣವರಿಗೆ ಬಡಿಸಿದರು ಮತ್ತು ಅವರು ಸಹ ಅದನ್ನು ಸೇವಿಸಿದರು. ಆಹಾರವನ್ನು ಸೇವಿಸಿದ ನಂತರ, ಕಂದಾಡೈ ಅಣ್ಣನ್ ತನ್ನ ನಿವಾಸದ ಪೀಠದ ಮೇಲೆ ಕುಳಿತಿದ್ದರು .

ಸಿಂಗರಾಯರ್ ನಿರೂಪಣೆ

ಒಬ್ಬ ಶ್ರೀವೈಷ್ಣವರು ಜೀಯರ್ ಅವರ ದಿವ್ಯ ನಿವಾಸದಿಂದ ಹೊರಬಂದರು. ಕಂದಾಡೈ ಅಣ್ಣನ್ ಅವರನ್ನು ನೋಡುತ್ತಾ ಕೇಳಿದರು.

“ನಿಮ್ಮ ಊರು ಯಾವುದು?
“ವಳ್ಳುವ ರಾಜೇಂದಿರಂ”
“ನೀವು ಇಲ್ಲಿಗೆ ಯಾವ ಉದ್ದೇಶಕ್ಕಾಗಿ ಬಂದಿದ್ದೀರಿ?”
“ಜೀಯರ್ ಅವರ ಪಾದಗಳ ಕೆಳಗೆ ಆಶ್ರಯ ಪಡೆಯಲು ಅಡಿಯೇನ್ ಕಾಯುತ್ತಿದ್ದೇನೆ. ಅಡಿಯೇನ್ ಇಂದು ಅನುಮತಿ ಪಡೆಯಲು ಸಾಧ್ಯವಾಗಲಿಲ್ಲ. ಅಂತಹ ಸಮಯ ಶೀಘ್ರದಲ್ಲೇ ಬರುತ್ತದೆ ಎಂಬ ಭರವಸೆಯೊಂದಿಗೆ ಅಡಿಯೇನ್ ಕಾಯುತ್ತಿದ್ದೇನೆ”
“ಈ ದೈವಿಕ ನಿವಾಸದಲ್ಲಿ ಅನೇಕ ಆಚಾರ್ಯರಿದ್ದಾರೆ. ಅವರಲ್ಲಿ ಒಬ್ಬರ ಕೆಳಗೆ ಆಶ್ರಯ ಪಡೆಯಲು ನಿಮಗೆ ಸಾಧ್ಯವಾಗಲಿಲ್ಲವೇ?”
“[ಎಂಪೆರುಮಾನನಿಂದ] ಪೆರಿಯ ಜೀಯರ್ [ಪೆರಿಯ ಜೀಯರ್ ಮಣವಾಳ ಮಾಮುನಿಗಳನ್ನು ಉಲ್ಲೇಖಿಸುತ್ತಾರೆ] ಅಡಿಯಲ್ಲಿ ಆಶ್ರಯ ಪಡೆಯಲು ಅಡಿಯೇನ್ ನೇಮಿಸಲ್ಪಟ್ಟಿದ್ದೇನೆ”
“ಎಂಪೆರುಮಾನನಿಂದ ನಿಮಗೆ ಹೇಗೆ ಆದೇಶ ಬಂತು?”
“ಅದು ದೇವರಹಸ್ಯ (ದೈವಿಕ ರಹಸ್ಯ)”
“ನಿಮ್ಮ ಹೆಸರೇನು?”
“ಸಿಂಗರಾಯರ್”

ಕಂದಾಡೈ ಅಣ್ಣನ್ ತನ್ನ ದಿವ್ಯ ಮನಸ್ಸಿನಲ್ಲಿ ಸಿಂಗರಾಯರು ಎಂಪೆರುಮಾನನ ಕಟಾಕ್ಷಕ್ಕೆ (ದೈವಿಕ ನೋಟ) ಸೂಕ್ತರಾಗಿರಬೇಕು ಎಂದು ನಿರ್ಧರಿಸಿದರು. ಅವರು ಸಿಂಗರಾಯರನ್ನು ತಮ್ಮ ಕೈ ಹಿಡಿದು ಕರೆದೊಯ್ದು, ತಮ್ಮ ಮನೆಯೊಳಗೆ ಕರೆದೊಯ್ದು, ಅವರಿಗೆ ತೀರ್ಥ (ಪವಿತ್ರ ನೀರು), ಶ್ರೀಗಂಧದ ಲೇಪ ಇತ್ಯಾದಿಗಳನ್ನು ಅರ್ಪಿಸಿ, “ದಯವಿಟ್ಟು ಈ ರಾತ್ರಿ ನಮ್ಮ ನಿವಾಸದಲ್ಲಿ ಇರಿ” ಎಂದು ಪ್ರೀತಿಯಿಂದ ಹೇಳಿದರು. ಅವರು ತಮ್ಮ ಸಹೋದರರಾದ ಕಂದಾಡೈ ಅಪ್ಪನ್ ಮತ್ತು ತಿರುಕ್ಕೋಪುರತ್ತು ನಾಯನಾರ್ ಭಟ್ಟರ್ ಅವರೊಂದಿಗೆ ತಮ್ಮ ಮನೆಯ ಹೊರಗಿನ ಪೀಠದ ಮೇಲೆ ಉಳಿದರು. ಆ ಸಮಯದಲ್ಲಿ, ತಿರುವಧ್ಯಯನಮ್ ‘ಕ್ಕೆ (ಶ್ರಾದ್ಧ) ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮುಗಿಸಿದ ನಂತರ, ಉತ್ಸಾಹಭರಿತಳಾಗಿ ಆಚ್ಚಿ, ಈ ಮಾತುಗಳನ್ನು ಹೇಳಿದಳು : “ಜೀಯರ್ ತಿರುವಡಿಗಳೇ ಶರಣಂ , ಪಿಳ್ಳೈ ತಿರುವಡಿಗಳೇ ಶರಣಂ , ವಾೞಿ ಉಳಗಾಸಿರಿಯನ್ ” (ಜೀಯರ್ ಅವರ ದಿವ್ಯ ಪಾದಗಳೇ ಆಶ್ರಯ, ಪಿಳ್ಳೈ ಅವರ ದಿವ್ಯ ಪಾದಗಳೇ ಆಶ್ರಯ, ಪಿಳ್ಳೈ ಲೋಕಾಚಾರ್ಯರು ದೀರ್ಘಕಾಲ ಬದುಕಲಿ) ಅವಳು ನಿದ್ರೆಗೆ ಜಾರಿದಾಗ. ಈ ಮಾತುಗಳು ಪೀಠದ ಮೇಲೆ ಕುಳಿತಿದ್ದ ಮೂವರು ಸಹೋದರರ ಕಿವಿಗೆ ಬಿದ್ದವು. ಈ ಮಾತುಗಳನ್ನು ಕೇಳಿ ಅವರಿಗೆ ಆಶ್ಚರ್ಯ ಮತ್ತು ಗೊಂದಲ ಉಂಟಾಯಿತು. (ಮೂವರಲ್ಲಿ ಕಿರಿಯವರಾದ) ಭಟ್ಟರು “ಅಡಿಯೇನ್ ಒಳಗೆ ಹೋಗಿ ವಿಚಾರಿಸುತ್ತೇನೆ” ಎಂದು ಹೇಳಿ ಒಳಗೆ ಹೋಗಿ “ಮಧಿನಿಯಾರೆ” (ಓ ಅತ್ತಿಗೆ!) ಎಂದು ಕೂಗಿದರು. ಅವಳು ಮಲಗುವುದಕ್ಕೆ ಮುಂಚೆ ಹೇಳಿದ್ದನ್ನು ಅವರು ಕೇಳಿದ್ದಾರೆಂದು ಆಚ್ಚಿಗೆ ತಿಳಿದಿತ್ತು ಮತ್ತು ಭಯವಾಯಿತು. ಕಂದಾಡೈ ಅಣ್ಣನ್ ಮತ್ತು ಅಪ್ಪನ್ ಭಟ್ಟರಿಗೆ ಕರೆ ಮಾಡಿ “ಈಗ ಅವಳನ್ನು ಎಬ್ಬಿಸಬೇಡಿ. ಬೆಳಗಾದ ನಂತರ ನಮಗೆ ಎಲ್ಲವೂ ತಿಳಿಯುತ್ತದೆ” ಎಂದು ಹೇಳಿ ನಿದ್ರೆಗೆ ಜಾರಿದರು. ಭಕ್ತಿಯಿಂದ ಆವರಿಸಲ್ಪಟ್ಟಿದ್ದರಿಂದ ಕಂದಾಡೈ ಅಣ್ಣನ್ ಅವರಿಗೆ ನಿದ್ರೆ ಬರಲಿಲ್ಲ.ಅವರ ಮೃದುವಾದ ಹಾಸಿಗೆ ತುಂಬಾ ಬಿಸಿಯಾಗಿತ್ತು, ಅವರಿಗೆ ಮಲಗಲು ಸಾಧ್ಯವಾಗಲಿಲ್ಲ; ಅವರ ಸಹೋದರರಿಗೆ ತಿಳಿಯದೆ, ಅವರು ಸಿಂಗರಾಯರ್ ಮಲಗಿದ್ದ ಸ್ಥಳಕ್ಕೆ ಹೋಗಿ, ಅವರನ್ನು ಎಬ್ಬಿಸಿ, ಆಧ್ಯಾತ್ಮಿಕ ಧರ್ಮದ (ಆತ್ಮದ ಸರಿಯಾದ ಕಾರ್ಯಗಳು) ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಹೇಳಿದರು. ಇವುಗಳನ್ನು ಕೇಳಿ ಸಿಂಗರಾಯರು ಸಂತೋಷಪಟ್ಟರು. ಆಗ ಅಣ್ಣನ್ ಅವರಿಗೆ, “ದೇವರೀರ್ ಎಂಪೆರುಮಾನನ ಆದೇಶವನ್ನು ಜೀಯರ್ ಅವರ ದಿವ್ಯ ಪಾದಗಳಲ್ಲಿ ಆಶ್ರಯ ಪಡೆಯಲು ಹೇಗೆ ಪಡೆದರು ಎಂಬುದನ್ನು ಅಡಿಯೇನ್ ದೇವರೀರಿಂದ ತಿಳಿದುಕೊಳ್ಳಲು ತುಂಬಾ ಇಷ್ಟಪಡುತ್ತೇನೆ ” ಎಂದು ಹೇಳಿದರು. ಸಿಂಗರಾಯರ್ ಈ ಕೆಳಗಿನವುಗಳನ್ನು ವಿವರಿಸಿದರು:

“ನಮ್ಮ ಊರಿನಲ್ಲಿ ಬೆಳೆಯುವ ತರಕಾರಿಗಳನ್ನು ಈ ಸ್ಥಳದಲ್ಲಿರುವ ಶ್ರೇಷ್ಠ ವ್ಯಕ್ತಿಗಳ ದೈವಿಕ ನಿವಾಸಗಳಿಗೆ ಅರ್ಪಿಸುವುದು ಅಡಿಯೇನರ ಪದ್ಧತಿ. ಒಂದು ದಿನ, ಒಬ್ಬ ಶ್ರೀವೈಷ್ಣವ ಅಡಿಯೇನರಿಗೆ ಅವುಗಳನ್ನು ಜೀಯರ್ ಅವರ ದೈವಿಕ ನಿವಾಸಕ್ಕೆ ಅರ್ಪಿಸಲು ಹೇಳಿದರು. ಅಡಿಯೇನರು ಅದನ್ನು ಒಂದು ಅದೃಷ್ಟವೆಂದು ಪರಿಗಣಿಸಿ ಮಠಕ್ಕೆ ಅರ್ಪಿಸಿದರು. ಅದನ್ನು ನೋಡಿದ ಜೀಯರ್, ಅಡಿಯೇನ್ ಅವರನ್ನು ‘ಇವುಗಳನ್ನು ಎಲ್ಲಿ ಬೆಳೆಸಲಾಯಿತು? ಯಾವ ನೀರನ್ನು ಬಳಸಲಾಯಿತು? ಸಸ್ಯಗಳಿಗೆ ಯಾರು ನೀರು ಹಾಕಿದರು? ಇವುಗಳನ್ನು ಇಲ್ಲಿಗೆ ಏಕೆ ತರಲಾಯಿತು?’ ಎಂದು ಕೇಳಿದರು. ಅಡಿಯೇನ್ ಅವರ ಪ್ರಶ್ನೆಗಳಿಗೆ ವಿನಮ್ರವಾಗಿ ಉತ್ತರಿಸಿದೆ ‘ಇವುಗಳನ್ನು ಶುದ್ಧ ಭೂಮಿಯಲ್ಲಿ ಬೆಳೆಸಲಾಯಿತು. ಅಡಿಚೇರಿಯಿಂದ ಬಂದ ದೇವರೀರ್ ಶಿಷ್ಯರು ಅವರಿಗೆ ನೀರುಣಿಸಿದರು. ಇವು ಭಾಗವತರ ಗುಣಲಕ್ಷಣಗಳು. ಉತ್ತರಗಳನ್ನು ಕೇಳಿ ಜೀಯರ್ ಸಂತೋಷಪಟ್ಟರು ಮತ್ತು ತಮ್ಮ ಒಪ್ಪಿಗೆಯನ್ನು ನೀಡಿದರು. ಅವರು ಅಡಿಯೇನ್ ಗೆ ದೇವಸ್ಥಾನಕ್ಕೆ ಹೋಗಿ ಪೆರುಮಾಳರನ್ನು ಪೂಜಿಸಲು ಹೇಳಿದರು. ಅಡಿಯೇನ್ ಸನ್ನಿಧಿಯನ್ನು ತಲುಪಿದ ನಂತರ, ಅರ್ಚಕರು ಅಡಿಯೇನ್ ಗೆ ‘ಇಂದು ನೀವು ತರಕಾರಿಗಳನ್ನು ಯಾರಿಗೆ ಅರ್ಪಿಸಿದ್ದೀರಿ?’ ಎಂದು ಕೇಳಿದರು. ಅಡಿಯೇನ್ ‘ಜೀಯರ್ ಮಠಕ್ಕೆ ‘ ಎಂದು ಉತ್ತರಿಸಿದೆ . ಅರ್ಚಕರು ಅಡಿಯೇನ್ ಬಗ್ಗೆ ಪ್ರೀತಿಯಿಂದ ವರ್ತಿಸಿ, ಬೆನ್ನು ತಟ್ಟಿ ‘ನೀವು ಅದೃಷ್ಟವಂತರು. ನೀವು ಒಂದು ವಿಶಿಷ್ಟ ಸಂಪರ್ಕವನ್ನು ಪಡೆಯಲಿದ್ದೀರಿ’ ಎಂದು ಹೇಳಿದರು. ಅವರು ಅಡಿಯೇನ್ ಪವಿತ್ರ ತೀರ್ಥ, ಶ್ರೀಗಂಧ, ಪ್ರಸಾದ , ಹಾರ, ವೀಳ್ಯದೆಲೆ, ಅಭಯ ಹಸ್ತ (ಶ್ರೀಗಂಧದ ಲೇಪನದಿಂದ ಮಾಡಿದ ನಂಪೆರುಮಾಳರ ದಿವ್ಯ ಹಸ್ತದ ಅಚ್ಚೊತ್ತುವಿಕೆ) ಮತ್ತು ಶ್ರೀ ಶಟಾರಿಯನ್ನು ಅರ್ಪಿಸಿದರು. ‘ಇಂದು ಅಡಿಯೇನ್ ಮೇಲೆ ಬಹಳಷ್ಟು ಕರುಣೆಯ ಸುರಿಮಳೆಯಾಗುತ್ತಿದೆ!’ ಎಂದು ಆಶ್ಚರ್ಯಕೊಂಡೆ . ‘ಅವರನ್ನು ಗಟ್ಟಿಯಾಗಿ ಹಿಡಿಯಿರಿ’ ಎಂಬ ಮಾತುಗಳನ್ನು ಅಡಿಯೇನ್‌ ಗೆ ಅರ್ಚಕರು ಹೇಳಿದ ಮಾತುಗಳನ್ನು ಕೇಳಿಸಿ ಕೊಂಡರು . ಆ ಮಾತುಗಳಲ್ಲಿ ಏನೋ ಅರ್ಥವಿತ್ತು. ಅಡಿಯೇನ್‌ ಮಠಕ್ಕೆ ಹಿಂತಿರುಗಿ , ಸಾಷ್ಟಾಂಗ ನಮಸ್ಕಾರ ಮಾಡಿ, ‘ದೇವರ ಸಲುವಾಗಿ ಪೆರುಮಾಳರು ಅಡಿಯೇನ್ ಮೇಲೆ ಬಹಳಷ್ಟು ಕರುಣೆಯನ್ನು ಸುರಿಸುತ್ತಿದ್ದರು’ ಎಂದು ಹೇಳಿ, ದೇವಸ್ಥಾನದಲ್ಲಿ ನಡೆದ ಘಟನೆಗಳನ್ನು ವಿವರಿಸಿದರು ಮತ್ತು ಮಠ ದಿಂದ ಹೊರಡಲು ಅವರ ಅನುಮತಿ ಕೇಳಿದರು. ಮಠ ನಲ್ಲಿರುವ ಶಿಷ್ಯರು ಅಡಿಯೇನ್ ರ ಬಗ್ಗೆ ಪ್ರೀತಿಯಿಂದ ಇದ್ದರು ಮತ್ತು ದಾರಿಯಲ್ಲಿ ಪ್ರಸಾದವನ್ನು ಸೇವಿಸಲು [ಪೆರುಮಾಳರಿಗೆ ಅರ್ಪಿಸಿದ ಆಹಾರ] ನೀಡಿದರು. ದಾರಿಯಲ್ಲಿ ಅಡಿಯೇನ್ ಆ ಪ್ರಸಾದವನ್ನು ಸೇವಿಸಿದ ತಕ್ಷಣವೇ ಅಡಿಯೇನ್ ಮನಸ್ಸಿನಲ್ಲಿ ಶುದ್ಧತೆಯನ್ನು ಅನುಭವಿಸಿ ಮತ್ತು ಜೀಯರ್‌ನಲ್ಲಿ ಆಶ್ರಯ ಪಡೆಯುವ ಆಸಕ್ತಿಯನ್ನು ಬೆಳೆಸಿಕೊಂಡೆ . ಆ ರಾತ್ರಿ, ಅಡಿಯೇನ್ ನ ಕನಸಿನಲ್ಲಿ, ಅಡಿಯೇನ್ ಪೆರಿಯ ಪೆರುಮಾಳ್‌ನನ್ನು ಪೂಜಿಸುತ್ತಿರುವಾಗ, ತಿರುಮಣತ್ತೂಣ್ (ಗರ್ಭಗೃಹದ ಹೊರಗಿನ ಕಂಬಗಳು) ಬಳಿ ನಿಂತಾಗ, ಪೆರಿಯ ಪೆರುಮಾಳ್ ತನ್ನ ದಿವ್ಯ ಹಸ್ತವನ್ನು ಅನಂತಾಳ್ವಾನ್ (ಆದಿಶೇಷನ) ಕಡೆಗೆ ಎತ್ತಿ, ಅಡಿಯೇನ್ ನಿಗೆ ಕರುಣೆಯಿಂದ ಹೇಳಿದರು ‘ನೋಡು! ಅವರು ಮಣವಾಳ ಚೀಯರ್ [ಜೀಯರ್ ] . “ಅವರೊಂದಿಗೆ ಸಂಪರ್ಕ ಸಾಧಿಸಿ”. ಇದಾದ ನಂತರ, ತೃಪ್ತರಾಗಿ, ಅಡಿಯೇನ್ ಜೀಯರ್ ಅವರ ದಿವ್ಯ ಪಾದಗಳ ಕೆಳಗೆ ಆಶ್ರಯ ಪಡೆಯಲು ಕಾಯುತ್ತಿದ್ದೇನೆ”. ಇದನ್ನು ಕೇಳಿದ ನಂತರ, ಕಂದಾಡೈ ಅಣ್ಣನ್ ಭಕ್ತಿಯಿಂದ ತುಂಬಿ, ತನ್ನೊಳಗೆ ದೀರ್ಘಕಾಲ ಯೋಚಿಸಿ ನಿದ್ರೆಗೆ ಜಾರಿದರು. ನಿದ್ರೆಯಲ್ಲಿ, ಅವರಿಗೆ ಒಂದು ಕನಸು ಬಿತ್ತು.

ಮೂಲ : https://granthams.koyil.org/2021/08/16/yathindhra-pravana-prabhavam-42-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೨”

Leave a Comment