ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಅಣ್ಣನ್ ಜೀಯರ್ ಅವರ ಆಶ್ರಯ ಪಡೆಯಲು ನಿರ್ಧರಿಸುತ್ತಾರೆ.

ತಧಾಗತಾಮ್ ತಾಮ್ ವ್ಯಥಿಧಾಮನಿಂಧಿತಾಮ್ ವ್ಯಭೇಧಹರ್ಷಾಮ್ ಪರಿಧೀನಮಾನಸಾಂ
ಶುಭಾ ನ್ನಿಮಿಥಿತಾನಿ ಶುಭಾನಿಭೇಜಿರೇ ನರಂಶ್ರೀಯಾಜುಷ್ಟಮ್ ಇವೋಪಜೀವಿನಃ

(ಬಡ ಜನರು ಶ್ರೀಮಂತ ವ್ಯಕ್ತಿಯನ್ನು ಮತ್ತು ಲಾಭವನ್ನು ಪಡೆಯುವಂತೆಯೇ, ಕೆಲವು ಶುಭ ಶಕುನಗಳು ಸಹ ಸೀತಾಪಿರಾಟ್ಟಿಯನ್ನು ಪಡೆದು ತಮ್ಮನ್ನು ತಾವು ಉಳಿಸಿಕೊಳ್ಳುತ್ತಿದ್ದವು. ಅವರು ಹೇಳಲಾಗದಷ್ಟು ಕಷ್ಟಗಳನ್ನು ಅನುಭವಿಸಿದ್ದರು, ಅಂದಿನಿಂದ ಹೆಚ್ಚಿನ ದುಃಖಗಳು ಬರುತ್ತವೆ ಎಂದು ಭಾವಿಸಿದ್ದರು, ಯಾವುದೇ ದೋಷವಿಲ್ಲದವರು ಮತ್ತು ಸಂಪೂರ್ಣವಾಗಿ ಸಂತೋಷವಿಲ್ಲದವರು).ಅಣ್ಣನ್ ಕೂಡ ಕೆಲವು ಶುಭ ಶಕುನಗಳನ್ನು ಸೃಷ್ಟಿಸಿದರು ಮತ್ತು ನಂತರ ಆಚ್ಚಿಯ [ತಿರುಮಂಜನ ಅಪ್ಪನ ಮಗಳು] ಮನೆಗೆ ಹೋಗಿ ಅವಳಿಗೆ ಹೇಳಿದರು.

ರಂಗೇಶ ಕೈಂಕರ್ಯಮ್ ಸುತೀರ್ಥ ದೇವರಾಜಾರ್ಯಜಾಮ್ ಪಾಕಲು ಭಾಗ್ಯಶೀಲಾ
ರಂಯೋಪಯಂತೂ: ಪಾದ ಸಂಶ್ರಯೇನ ಯಸ್ಮತ್ಕುಲಂ ಪಾವನಮಾಧನೋತಿ

(ಆಚ್ಛಿಯಾರನ್ನು ಮಗಳಾಗಿ ಪಡೆದ , ತಿರುಮಂಜನಂ ದೇವರಾಜರು ಭಾಗ್ಯಶಾಲಿ ಅಲ್ಲವೇ ? ಆಚ್ಛಿಯಾರ್ ಮಾಮುನಿಗಳ ದಿವ್ಯ ಪಾದಗಳ ಅಡಿಯಲ್ಲಿ ಆಶ್ರಯ ಪಡೆದು ನಮ್ಮ ಕುಲವನ್ನು ಶುದ್ಧಗೊಳಿಸಿದ್ದಾರೆ.) ಅವರು ಸಂತೋಷಗೊಂಡು “ನೀವು ತಯಾರಿಸಿದ ಆಹಾರವನ್ನು ಸೇವಿಸಿದ್ದರಿಂದಲೇ ನಮ್ಮಗೆ ಈ ಪ್ರಯೋಜನ ಸಿಕ್ಕಿತು!” ಎಂದು ಹೇಳಿದರು. ನಂತರ ಅವರು ಉತ್ತಮ ನಂಬಿಗಳಿಗೆ ಸುದ್ದಿ ಕಳುಹಿಸಿ ; ಈ ಸಂದೇಶವನ್ನು ತನ್ನ ಬಂಧುಗಳಾದ ಕಂದಾಡೈ ಅಯ್ಯಂಗಾರರಿಗೆ ಹರಡಿದರು . ಅವರು ಸಹ ಮಾಮುನಿಗಳ ದಿವ್ಯ ಪಾದಗಳಲ್ಲಿ ಆಶ್ರಯ ಪಡೆಯುವಂತೆ ಮಾಡಲು ಅವರ ನಿವಾಸಗಳಿಗೆ ಹೋಗಿ ಹೇಳಿದರು . ಆಚ್ಚಿಯಾರ’ರ ಪುತ್ರರಾದ ಅಣ್ಣ, ದಾಶರಥಿ ಅಪ್ಪೈ ಮತ್ತು ತಂದಾಡೈ ಅಪೈ ಎಂಬಾ ಅವರಿಗೂ ಸಹ ಅವರ ಅಣ್ಣನಂತೆಯೇ ಕನಸು ಕಂಡಿದ್ದಾರೆ ಎಂದು ಹೇಳಿ ಅವರ ಪಾದಗಳಿಗೆ ನಮಸ್ಕರಿಸಿದರು.ಅಣ್ಣನ್ ಅವರೊಂದಿಗೆ ಎಂಬಾ ಅವರ ನಿವಾಸಕ್ಕೆ ಹೋದರು, ಅವರು ಒಬ್ಬ ಪ್ರಸಿದ್ಧ ವ್ಯಕ್ತಿ ಲಕ್ಷ್ಮಣಾಚಾರ್ಯರ ಮೊಮ್ಮಗ,

ಇದನ್ನು ಕೇಳಿ ಎಂಬಾ , ತುಂಬಾ ಕೋಪಗೊಂಡು ಕಂದಾಡೈ ಅಣ್ಣನನ್ನು ಕೇಳಿದರು , “ಉತ್ತಮ ಹೆಸರು, ಶಿಕ್ಷಣ ಮತ್ತು ನಡವಳಿಕೆಯನ್ನು ಹೊಂದಿರುವ ದೊಡ್ಡ ಕುಲದಲ್ಲಿ ಜನಿಸಿದ ನೀವು ಹೀಗೆ ಮಾಡುತ್ತೀರಾ?” ಅಣ್ಣನ್ ಅಪ್ಪಾ ‘ ಅವರ ನಿವಾಸಕ್ಕೆ ಹೋದರು ಮತ್ತು ಪೆರಿಯ ಆಯಿ ನಂಥ ದೈವಿಕ ಕುಲಕ್ಕೆ ಸೇರಿದ ತನ್ನ ಮಗನಂತಿದ್ದ ಎಂಬಾ ಮತ್ತು ಇತರ ನಿವಾಸಗಳಿಗೆ ಹೋಗಿ ಜೀಯರ್‌ನಲ್ಲಿ ಆಶ್ರಯ ಪಡೆಯುವ ಬಗ್ಗೆ ಅವರಿಗೆ ಒಳ್ಳೆಯ ಮಾತುಗಳನ್ನು ಹೇಳಿದರು. ಆದರೆ ಅವರೂ ಮಾಮುನಿಗಳ್‌ನಲ್ಲಿ ಆಶ್ರಯ ಪಡೆಯಲು ನಿರಾಕರಿಸಿದರು. ತನ್ನ ದಿವ್ಯ ಹೃದಯದಲ್ಲಿ ದುಃಖಿತರಾದ ಅಣ್ಣನು, ತನ್ನ ಕುಲಕ್ಕೆ ಸೇರಿದ ಮತ್ತು ತನ್ನ ಸಹೋದರರಂತೆಯೇ ಇದ್ದ ಸುಮಾರು ಇಪ್ಪತ್ತು ಜನರ ನಿವಾಸಗಳಿಗೆ ಹೋದರು. ಅವರು ಅಣ್ಣನನ್ನು ಪ್ರೀತಿಯಿಂದ ಸ್ವಾಗತಿಸಿದರು, ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು, ಅಣ್ಣನು ಹೇಳಿದ ಒಳ್ಳೆಯ ಮಾತುಗಳನ್ನು ಕೇಳಿದರು, ತಮ್ಮ ಕನಸುಗಳನ್ನು ಮತ್ತು ಇತರ ಒಳ್ಳೆಯ ಮಾತುಗಳನ್ನು ಅವರಿಗೆ ಹೇಳಿದರು, ಅಲಗಿಯ ಮಣವಾಳ ಮಾಮುನಿಗಳ ಮಹಿಮೆಗಳನ್ನು ಹೊಗಳಿದರು ಮತ್ತು ಮಾಮುನಿಗಳ ಆಶ್ರಯ ಪಡೆಯುವ ಇಚ್ಛೆಯನ್ನು ತಿಳಿಸಿದರು.ನಂತರ ಅವರು ತಮ್ಮ ಪತ್ನಿಯರು ಮತ್ತು ಕುಟುಂಬ ಸದಸ್ಯರೊಂದಿಗೆ ಹಣ್ಣುಗಳು ಮತ್ತು ಇತರ ಕೊಡುಗೆಗಳನ್ನು ಮಾಮುನಿಗಳ ದೈವಿಕ ನಿವಾಸಕ್ಕೆ ತೆಗೆದು ಕೊಂಡು ಹೋಗಲು ಹೇಳಿದರು .

ಅವರು ತಮ್ಮ ಹೆತ್ತವರಿಂದ ದೂರವಾಗಿ ಕಂದಾಡೈ ಅಣ್ಣನ ದೈವಿಕ ನಿವಾಸಕ್ಕೆ ಗುರುಕುಲವಾಸ (ಉಳಿದು ಅಧ್ಯಯನ ನಡೆಸಲು ನಿವಾಸ) ಎಂದು ಬಂದಿದ್ದ ತಿರುವಾಳಿಯಾಳ್ವಾರ್ ಪಿಳ್ಳೈ ಅವರನ್ನು ತಮ್ಮೊಂದಿಗೆ ಕರೆದೊಯ್ದರು, ಅಣ್ಣನ ದೈವಿಕ ಪಾದಗಳನ್ನು ತಮ್ಮ ಧಾರಕ, ಪೋಷಕ ಮತ್ತು ಭೋಗ್ಯ (ಸ್ಥಿರತೆ, ಪೋಷಣೆ ಮತ್ತು ಆನಂದ) ಎಂದು ಪರಿಗಣಿಸಿದರು. ಅಣ್ಣನ್, ಜೀಯರ್ ಅವರ ದಿವ್ಯ ಪಾದಗಳ ಕೆಳಗೆ ಆಶ್ರಯ ಪಡೆದಿದ್ದ ಶುದ್ಧ ಸತ್ವಂ ಅಣ್ಣನ್ ಅವರನ್ನು ಸಹ ಕರೆದುಕೊಂಡು ಹೋಗಿ, ಅವರ ದೈನಂದಿನ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಾ ಮತ್ತು ಭಗವದ್ ವಿಷಯದಲ್ಲಿ ಅಣ್ಣನ್ ಅವರ ಒಳಗೊಳ್ಳುವಿಕೆಯ ಬಗ್ಗೆ ಮಾತನಾಡುತ್ತಾ, ಜೀಯರ್ ಅಣ್ಣನ್ ಅವರ ಮೇಲೆ ಕರುಣೆ ತೋರಿಸಲಿ ಎಂದು ಹೇಳಿದರು. ಅಣ್ಣನ್ ಯೋಚಿಸಿದರು , “ಶುದ್ಧ ಸತ್ವಂ (ಸಂಪೂರ್ಣವಾಗಿ ಒಳ್ಳೆಯವನು) ಎಂಬ ಅವನ ಹೆಸರಿಗೆ ತಕ್ಕಂತೆ, ಅವನು ನಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಲು ಸಾಧ್ಯವಾಗುತ್ತದೆ.ಅವರ ಒಳ್ಳೆಯ ಸ್ವಭಾವದ ಹೃದಯದಿಂದಾಗಿ, ಎಲ್ಲವೂ ಸರಿಯಾಗಿ ನಡೆಯುತ್ತದೆ ಮತ್ತು ಯಾವುದೇ ಅಡೆತಡೆಗಳು ಇರುವುದಿಲ್ಲ ಎಂದು ಭಾವಿಸಿದರು”. ಈ ಇಬ್ಬರ ಜೊತೆಗೆ, ಅಣ್ಣನ್ ತನ್ನ ಸಹೋದರರು ಮತ್ತು ಸಂಬಂಧಿಕರನ್ನು ಸಹ ಜೀಯರ್ ಅವರ ಮಠಕ್ಕೆ ಕರೆದೊಯ್ದರು .

ಮೂಲ : https://granthams.koyil.org/2021/08/16/yathindhra-pravana-prabhavam-44-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೪”

Leave a Comment