ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ
ಅಣ್ಣನು ಮಾಮುನಿಗಳ ಅಡಿಯಲ್ಲಿ ಆಶ್ರಯ ಪಡೆಯುತ್ತಾರೇ
ತರುವಾಯ, ಶ್ಲೋಕದಲ್ಲಿ ಹೇಳಿರುವಂತೆ
ರಾಮಾನುಜ ಪದಾಂಭೋಜ ಸೌಗಂಧ್ಯ ನಿಧಾಯೋಪಿಯೇ
ಅಸಾಧಾರಣ ಮೌನ್ನತ್ಯ ಮಾವಧೂಯ ನಿಜಾಂಧಿಯಾ
ಉತ್ತ್ತೆ ಜಯಂತಸ್ ಸ್ವಾತ್ಮಾನಮ್ ಥಾತ್ತೇಜಸ್ಸಂಪಧಾ ಸಧಾ
ಸ್ವೇಷಾಮತಿಶಯಮ್ ಮಥವಾ ತಥ್ವೇನ ಶರಣಂ ಯಯು:
(ಎಂಪೆರುಮಾನಾರ್ (ರಾಮಾನುಜರ) ದಿವ್ಯ ಪಾದಗಳಿಂದ ಮಧುರವಾದ ಸುವಾಸನೆಯನ್ನು ಪಡೆದವರು, ತಮ್ಮದಾಗಿದ್ದ ಶ್ರೇಷ್ಠತೆಯನ್ನು ತೊಡೆದುಹಾಕಿ ಹೆಚ್ಚಿನ ಹೊಳಪನ್ನು ಪಡೆಯಲು ಉದ್ದೇಶಿಸಿ, ಆ ಮಾಮುನಿಗಳ ಹೇರಳವಾದ ತೇಜಸ್ಸಿನಿಂದ ತಮಗೆ ಶ್ರೇಷ್ಠತೆ ಸಿಗುತ್ತದೆ ಎಂದು ಭಾವಿಸಿ, ಆ ಮಾಮುನಿಗಳಿಗೆ ಸಂಪೂರ್ಣವಾಗಿ ಶರಣಾದರು), ಕಂದಾಡೈ ಅಣ್ಣನ್ ಸೇರಿದಂತೆ ಎಲ್ಲಾ ಗುರುಗಳು ರಾಮಾನುಜರಿಂದ ಆಶೀರ್ವದಿಸಲ್ಪಟ್ಟು, ತಮ್ಮ ಜನ್ಮ, ಜ್ಞಾನ ಮತ್ತು ನಡವಳಿಕೆಯಲ್ಲಿ ಶ್ರೇಷ್ಠತೆಯನ್ನು ಹೊಂದಿ, ತಮ್ಮ ಶ್ರೇಷ್ಠತೆಯನ್ನು ನೋಡದೆ, ಜೀಯರ್ ಅವರ ದಿವ್ಯ ಪಾದಗಳ ಸಂಪರ್ಕವು ಮಾತ್ರ ಅವರಿಗೆ ತಮ್ಮ ಎಲ್ಲಾ ಶ್ರೇಷ್ಠತೆಯನ್ನು ನೀಡುತ್ತದೆ ಎಂದು ಮನಸ್ಸಿನಲ್ಲಿ ದೃಢವಾಗಿ ನಂಬಿ, ಜೀಯರ್ ಅವರ ದಿವ್ಯ ಪಾದಗಳ ಕೆಳಗೆ ಆಶ್ರಯ ಪಡೆಯಲು ಅವರನ್ನು ಸಂಪರ್ಕಿಸಿದರು.ಅಣ್ಣನ್ ಜೀಯರ್ ಅವರ ದಿವ್ಯ ಸನ್ನಿಧಿಗೆ ಹೋಗಿ, “ನೀವು ಅನುಯಾಯಿಗಳ ಮೇಲೆ ಕರುಣೆ ತೋರಿಸಲು ನಿಗದಿಪಡಿಸಿದ ದಿನವೂ ಬಂದಿದೆ. ಎಂಬಾ ಮತ್ತು ಇತರರು [ಹಿಂದೆ] ತಡೆಯಲ್ಪಟ್ಟ ಕೆಲವರು ಎಂಪೆರುಮಾನನು ತಮ್ಮ ಕನಸಿನಲ್ಲಿ ಹೇಳಿದ ಕಾರಣದಿಂದ ತಮ್ಮ ಮಾರ್ಗವನ್ನು ಸರಿಪಡಿಸಿಕೊಂಡು ಈ ಘೋಷ್ಠಿಯಲ್ಲಿ (ಸಭೆಯಲ್ಲಿ) ಒಟ್ಟುಗೂಡಿದ್ದಾರೆ. ದೇವರೀರ್ ಎಲ್ಲರ ಮೇಲೆ ಕರುಣೆ ತೋರಿಸಬೇಕು” ಎಂದು ಹೇಳಿದರು. ಜೀಯರ್ ವಾನಮಾಮಲೈ ಜೀಯರ್ ಅವರನ್ನು ಸನ್ನೆ ಮಾಡಿ ಸಮಾಶ್ರಯ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಹೇಳಿದರು. ಜೀಯರ್ [ಮಣವಾಳ ಮಾಮುನಿಗಳು] ತಿರುವಾರಾಧನಂ (ಎಂಪೆರುಮಾನನ ದೈವಿಕ ಪೂಜೆ) ನಡೆಸಿ ದೈವಿಕ ಆಹಾರ ಮತ್ತು ಹಣ್ಣುಗಳನ್ನು ಅರ್ಪಿಸಿದರು. ಅವರು ಸಮಾಶ್ರಯಕ್ಕೆ ಒಳಗಾಗಬೇಕಾದ ಎಲ್ಲರನ್ನು ಕರೆದು ಸಾಮಾನ್ಯವಾಗಿ ಮಾಡುವ ಎಲ್ಲಾ ಚಟುವಟಿಕೆಗಳನ್ನು ನಡೆಸಿದರು, ಅಂದರೆ ಥಾಪ: ಪುಂಡ್ರ ಸ್ಥತಾನಾಮ ಮಂತ್ರೋಯಗಶ್ಚ ಪಂಚಮ: (ದೈವಿಕ ಚಿಹ್ನೆಗಳನ್ನು ಉಬ್ಬಿಸುವುದು, ಹನ್ನೆರಡು ತಿರುಮನ್ ಕಾಪ್ಪು (ಎಂಪೆರುಮಾನನ ರಕ್ಷಣಾತ್ಮಕ ಲಾಂಛನ)ವನ್ನು ಅನ್ವಯಿಸುವುದು, ದಾಸ್ಯನಾಮವನ್ನು ನೀಡುವುದು (ಸೇವಕನಾಗಿರುವ ಹೆಸರು), ಮಂತ್ರೋಪದೇಶ (ಎಂಪೆರುಮಾನನ ದೈವಿಕ ಮಂತ್ರ (ಸ್ತೋತ್ರ) ಪಠಣವನ್ನು ಸೂಚಿಸುವುದು) ಮತ್ತು ದೇವಪೂಜವನ್ನು (ಎಂಪೆರುಮಾನನಿಗೆ ದೈನಂದಿನ ಪೂಜೆಯನ್ನು ಮಾಡುವ ವಿಧಾನ) ನಡೆಸುವುದು). ಅವನು ಆನಂದದಿಂದ ಅಣ್ಣನನ್ನು ಕರುಣೆಯಿಂದ ನೋಡುತ್ತಲೇ ಇದ್ದರು.
ಅಪ್ಪಾಚ್ಚಿಯಾರಣ್ಣ ವಾನಮಾಮಲೈ ಜೀಯರ್ ಅಡಿಯಲ್ಲಿ ಆಶ್ರಯ ಪಡೆಯುತ್ತಾರೆ
ಜೀಯರ್ ವಾನಮಾಮಲೈ ಜೀಯರ್ ಅವರನ್ನು ತೋರಿಸಿ ದಯೆಯಿಂದ ಹೇಳಿದರು, “ಅವರು ನಮ್ಮ ಹೃದಯಕ್ಕೆ ತುಂಬಾ ಪ್ರಿಯರು. ನಮಗೆ ಏನೇನು ಮಹಿಮೆ ಸಂಭವಿಸಿತೋ, ಅದು ಅವರಿಗೂ ಆಗಬೇಕು”. ಜೀಯರ್ ಅವರ ದಿವ್ಯ ಮನಸ್ಸನ್ನು ತಿಳಿದ ಅಣ್ಣನ್ “ಅಡಿಯೇನ್ ಅವರ ಆಶ್ರಯ ಪಡೆಯಬಹುದಿತ್ತು” ಎಂದು ಹೇಳಿದರು, ಅದಕ್ಕೆ ಜೀಯರ್ “ನಮ್ಮದನ್ನು ನಾವು ಹೇಗೆ ಬಿಟ್ಟುಕೊಡಬಹುದು?” ಎಂದು ಉತ್ತರಿಸಿದರು. ಅಣ್ಣನ್ ತಮ್ಮ ಸಂಬಂಧಿಕರನ್ನು ಕರುಣೆಯಿಂದ ನೋಡಿ, ಜೀಯರ್ ಅವರ ಬಯಕೆಯನ್ನು ಸೂಚಿಸಿದರು.ಅಣ್ಣ ಎಂದು ಕರೆಯಲ್ಪಡುವ ಆಚ್ಚಿಯ ಮಗ ಎದ್ದು ಅವರ ಮುಂದೆ ನಮಸ್ಕರಿಸಿದರು ; ಜೀಯರ್ ಅವನ ಆಸೆಯನ್ನು ಕೇಳಿದರು ; ಅವರು ಹೇಳಿದರು “ದೇವರೀರ್ ನಮ್ಮ ಪ್ರಭುವಾದ ವಾನಮಾಮಲೈ ಜೀಯರ್ ಅವರ ದೈವಿಕ ಪಾದಗಳನ್ನು ತೆಗೆದುಕೊಳ್ಳಲು ಅಡಿಯೇನ್ ಅವರನ್ನು ಅನುಮತಿಸಬೇಕು” ಜೀಯರ್ ತುಂಬಾ ಸಂತೋಷಪಟ್ಟರು ಮತ್ತು “ನೀನು ನಮ್ಮ ಅಪ್ಪಾಚ್ಚಿಯಾರ್ ಅಣ್ಣನೇ!” (ಆಚ್ಚಿಯ ಮಗ) ಎಂದು ಉದ್ಗರಿಸಿದರು.ನಂತರ ಅವರು ಅಪ್ಪಾಚ್ಚಿಯಾರ್ ಅಣ್ಣನ ಕೈ ಹಿಡಿದು, ಪಕ್ಕದಲ್ಲಿಟ್ಟುಕೊಂಡು, ತಮ್ಮ ಆಸನದಿಂದ ಎದ್ದು ವಾನಮಾಮಲೈ ಜೀಯರ್ ಅವರನ್ನು ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಹೇಳಿದರು. ನಂತರ ಅವರು ಅಪ್ಪಾಚ್ಚಿಯಾರ್ ಅಣ್ಣನನ್ನು ವಾನಮಾಮಲೈ ಜೀಯರ್ ಅವರಿಗೆ ಕೊಟ್ಟು, ಅವರಿಗೆ ಸಮಾಶ್ರಯವನ್ನು ಕೈಗೊಳ್ಳಲು ಹೇಳಿದರು.ವಾನಮಾಮಲೈ ಜೀಯರ್ ಹಿಂಜರಿದರು; ಜೀಯರ್ ಅವರಿಗೆ “ಹಿಂದೆ ಸರಿಯಬೇಡಿ; ನಮಗೆ ಪ್ರಿಯವಾದದ್ದನ್ನು ಕೈಗೊಳ್ಳಿ” ಎಂದು ಹೇಳಿದರು. ನಂತರ ಅವರು ಅಪ್ಪಾಚ್ಚಿಯಾರ್ ಅಣ್ಣನನ್ನು ತಬ್ಬಿಕೊಂಡು ವಾನಮಾಮಲೈ ಜೀಯರ್ ಅವರ ದೈವಿಕ ಪಾದಗಳ ಕೆಳಗೆ ಆಶ್ರಯ ಪಡೆಯುವಂತೆ ಮಾಡಿದರು. ತಕ್ಷಣವೇ, ಅಪ್ಪಾಚ್ಚಿಯಾರ್ ಅಣ್ಣನ ಕಿರಿಯ ಸಹೋದರ, ಧಾಸರಥಿ ಅಪ್ಪೈ ಕೂಡ ವನಮಲೈ ಜೀಯರ್ ಅವರ ದಿವ್ಯ ಪಾದಗಳ ಕೆಳಗೆ ಆಶ್ರಯ ಪಡೆದರು. ವಾನಮಾಮಲೈ ಜೀಯರ್ ಆಸನದಿಂದ ಎದ್ದು, “ದಯವಿಟ್ಟು ಅಡಿಯೇನನ್ನು ಬಿಟ್ಟುಬಿಡಿ ; ಇದು ಸಾಕು” ಎಂದರು. ಅವರು ಸ್ವಲ್ಪ ದೂರ ಹೋಗಿ ಅಲ್ಲಿಂದ ನಮಸ್ಕರಿಸಿದರು. ನಂತರ ಮಾಮುನಿಗಳು ಕಂದಾಡೈ ಅಣ್ಣನ್ ಕಿರಿಯ ಸಹೋದರ ಕಂದಾಡೈ ಅಪ್ಪನ್ ಮತ್ತು ಇತರ ಸಹೋದರರು ಹಾಗೂ ಇತರ ಸಂಬಂಧಿಕರು ಮತ್ತು ಅವರ ಸಂಗಾತಿಗಳು ಮತ್ತು ಮಕ್ಕಳಿಗೆ ಸಮಾಶ್ರಯನ ಮಾಡಿದರು; ಒಟ್ಟು 120 ಜನರು ಇದನ್ನು ಪೂರ್ಣಗೊಳಿಸಿದರು. ಸಿಂಗರಾಯರ್ ಮತ್ತು ಇತರರು ಸಹ ಮಾಮುನಿಗಳ ಅಡಿಯಲ್ಲಿ ಸಮಾಶ್ರಯನವನ್ನು ಮಾಡಿದರು. ದೇವಾಲಯದಿಂದ, ಎಲ್ಲಾ ಸಿಬ್ಬಂಧಿ ಪೆರುಮಾಳ್ ಅವರ ಪ್ರಸಾದದೊಂದಿಗೆ ಅಲ್ಲಿಗೆ ಬಂದರು. ಜೀಯರ್ ಹೊರಗೆ ಹೋಗಿ, ದೇವಾಲಯದ ಗೌರವವನ್ನು ಸ್ವೀಕರಿಸಿ, ಜನರನ್ನು ದಯೆಯಿಂದ ಒಳಗೆ ಕರೆದರು. ಕಂದಾಡೈ ಅಣ್ಣನ್ ಅವರನ್ನು ಪೋಷಿಸಿ ಸೂಕ್ತವಾಗಿ ಉಡುಗೊರೆಗಳನ್ನು ನೀಡಿದರು. ತರುವಾಯ, ಆ ದಿನ ಆಶ್ರಯ ಪಡೆದ ಎಲ್ಲಾ ಜನರು ದೇವಾಲಯಕ್ಕೆ ದಯೆಯಿಂದ ಹೋಗಿ, ಎಂಪೆರುಮಾನಾರ್, ಆಳ್ವಾರ್, ನಾಚ್ಚಿಯಾರ್ ಮತ್ತು ಪೆರುಮಾಳ್ರನ್ನು ಪೂಜಿಸಿ, ಪ್ರತಿ ಸನ್ನಿಧಿಯಲ್ಲಿಯೂ ಅವರನ್ನು ಸ್ತುತಿಸಿ ಜೀಯರ್ರ ಮಾತಿಗೆ ಮರಳಿದರು.
ಚಿರವಿರಹತಸ್ ಚಿಂತಾ ಸಂತಾನಜಾರ್ಜಜರ ಚೇತಸಂ
ಭುಜಗಶಯನಂ ದೇವಾಂಭೂಯ: ಪ್ರಸಾಧಯಿತುಂ ಧ್ರುವಂ
ಯತಿಕುಲಪತಿ: ಶ್ರೀಮಾನ್ ರಾಮಾನುಜ ಸ್ವಯಮಿತ್ಯ ಭೂ
ತಿಧಿತಿ ಸಮಧುಶನ್ ಸರ್ವೇ ಸರ್ವತ್ರ ಥಾತ್ರ ಸುತೇಜನಾ:
(ಶ್ರೀ ರಂಗನಾಥ ಪೆರುಮಾಳ್ ಇಹಲೋಕ ತ್ಯಜಿಸಿದ ನಂತರ ಯತಿಗಳ (ತಪಸ್ವಿಗಳ) ಅಧಿಪತಿಯಾದ ಶ್ರೀ ರಾಮಾನುಜರ ಬಗ್ಗೆ ನಿರಂತರವಾಗಿ ಯೋಚಿಸುತ್ತಾ ಬಳಲುತ್ತಿದ್ದರಿಂದ, ಪೆರುಮಾಳರನ್ನು ಸಂತೋಷಪಡಿಸಲು ಅವರು ಮಣವಾಳ ಮಾಮುನಿಗಳಾಗಿ ಪುನರ್ಜನ್ಮ ಪಡೆದರು ಎಂದು ಅಲ್ಲಿನ ಜ್ಞಾನಿಗಳು ಬಹಳ ಸಂತೋಷಪಟ್ಟರು). ಅವರು ಮಾಮುನಿಗಳನ್ನು ರಾಮಾನುಜರ ಪುನರ್ಜನ್ಮವೆಂದು ಪರಿಗಣಿಸಿ, ಅವರ ದಿವ್ಯ ಪಾದಗಳಿಗೆ ಬಿದ್ದು ಅವರ ಮೇಲೆ ಪ್ರೀತಿಯನ್ನು ಹೊಂದಿದ್ದರು.
ಜೀಯರ್ ತಮ್ಮ ಶಿಷ್ಯರೊಂದಿಗೆ ದಯೆಯಿಂದ ಬದುಕುತ್ತಿದ್ದಾಗ ತಿರುವಾಳಿಯಾಳ್ವಾರ್ ಪಿಳ್ಳೈ ಅವರನ್ನು ಶ್ರೀಕೋಸಂಗಳನ್ನು (ಎಂಪೆರುಮಾನಾರ್ ದರ್ಶನಂನಲ್ಲಿರುವ ಹಸ್ತಪ್ರತಿಗಳು) ಪರಿಶೀಲಿಸಲು ಮತ್ತು ಅವುಗಳನ್ನು ಸುರಕ್ಷಿತವಾಗಿಡಲು ಕೇಳಿಕೊಂಡರು; ಹಳೆಯ/ಹಾನಿಗೊಳಗಾದ ಹಸ್ತಪ್ರತಿಗಳನ್ನು ಸರಿಯಾಗಿ ಬರೆಯಲು ಮತ್ತು ಇವುಗಳ ಪ್ರತಿಗಳನ್ನು ಮಾಡಲು ಅವರು ಬರಹಗಾರರನ್ನು ನೇಮಿಸಿದರು.ಅವರು ಅಗತ್ಯವಿದ್ದಾಗಲೆಲ್ಲಾ, ಅವರಿಗೆ ಶ್ರೀಕೋಸಂಗಳನ್ನು ನೀಡಲಾಗುತ್ತಿತ್ತು, ಇದರಿಂದಾಗಿ ಅವರು ಇಡು (ತಿರುವಾಯ್ಮೊಳಿಗಾಗಿ ಮುಪ್ಪತ್ತರಾಯಿರಪ್ಪಡಿ ವ್ಯಾಖ್ಯಾನ) ವನ್ನು ಹೆಚ್ಚುವರಿ ವಾಕ್ಯಗಳ ಮೂಲಕ ವಿವರಿಸಲು ಸಾಧ್ಯವಾಗುತ್ತಿತ್ತು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/08/16/yathindhra-pravana-prabhavam-46-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೬”